ಅಪರಾಧ

ಬಿಜೆಪಿ ಶಾಸಕ ರಾಜುಗೌಡ ಆಪ್ತನ ಮೇಲೆ ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ

ಯಾದಗಿರಿ prajakiran.com : ಹಾಡಹಗಲೇ ಜಿಲ್ಲಾ ಪಂಚಾಯತ ವಿಪಕ್ಷ ನಾಯಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ. ನಗರದ ಎಸ್.ಪಿ. ಕಚೇರಿ ಸಮೀಪ ಚಿತ್ತಾಪುರ ರಸ್ತೆಯಲ್ಲಿ ಈ ರ್ದುಘಟನೆ ನಡೆದಿದ್ದು, ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಬಿಜೆಪಿ ಮುಖಂಡ, ಜಿಪಂ  ಸದಸ್ಯ ಹಾಗೂ  ಶಾಸಕ ರಾಜುಗೌಡ  ಆಪ್ತನಾಗಿದ್ದ ಮರಿಲಿಂಗಪ್ಪ ಕರ್ನಾಳ ಎಂಬುವರೇ ಹಲ್ಲೆಗೊಳಗಾಗಿದ್ದಾರೆ. ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಲ್ಲಲು ಯತ್ನಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ಚೀರಾಡುತ್ತಾ ಸಾರ್ವಜನಿಕರೆಡೆಗೆ ಓಡುತ್ತಿದ್ದಂತೆ […]

ಅಪರಾಧ

ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಮುಳುಗಿ ವ್ಯಕ್ತಿ ಸಾವು,ಇಬ್ಬರು ಗಂಭೀರ

ಕೊಡಗು(ಭಾಗಮಂಡಲ) prajakiran.com : ದಕ್ಷಿಣ ಭಾರತದ ಪುಣ್ಯಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ ಕಾವೇರಿಯ ಉಗಮ ಸ್ಥಾನ ಶ್ರೀ ಕ್ಷೇತ್ರ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಬೆಳ್ಳಂಬೆಳಗೆ ದುರಂತ ಸಂಭವಿಸಿದೆ. ಕರೊನಾ ಹಿನ್ನಲೆಯಲ್ಲಿ ಪುಣ್ಯ ಸ್ನಾನಕ್ಕೆ ನಿರ್ಭಂದದ ನಡುವೆಯೂ ವರ್ಷದ ಪೂಜೆ ನಡೆಸಲು ನೀರಿಗೆ ಇಳಿದ ಕುಟುಂಬದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರು ಜಿಲ್ಲೆಯ ಹುಣಸೂರಿನಿಂದ ಆಗಮಿಸಿದ್ದ ಕುಟುಂಬ, ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಮಣಿಕಂಠ ,ಯಶೋಧ,ಪ್ರಮಿಳಾ ನೀರಿನಲ್ಲಿ […]

ಅಪರಾಧ

ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಎಎಸ್‌ಐ…!

ಕೊಡಗು prajakiran.com : ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸಿ  ನಿವೃತ್ತಿ ಹೊಂದಿದ ಒಂದೇ ತಿಂಗಳಿನಲ್ಲಿ  ಗುಂಡು ಹೊಡೆದು ನಿವೃತ್ತ ಎಎಸ್ ಐ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ಈ ರ್ದುಘಟನೆ ನಡೆದಿದೆ. ಮೃತರನ್ನು ಎಂ.ಎಸ್‌.  ಈರಪ್ಪ (61) ಎಂದು ಗುರುತಿಸಲಾಗಿದ್ದು, ಇವರು ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿ, ಕಳೆದ ಮೇ ೩೦ ರಂದು ಸೇವಾ […]

ಅಪರಾಧ

ಧಾರವಾಡದಲ್ಲಿ ಮನೆ ಕೀಲಿ ಮುರಿದು ರಿವಾಲ್ವರ್ ಹೊತ್ತೈದ ಖದೀಮರು …!

ಧಾರವಾಡ prajakiran.com : ಮನೆ ಕೀಲಿ ಮುರಿದು ಕಳ್ಳತನ ಮಾಡಿದ ಕಳ್ಳರು ಮನೆಯಲ್ಲಿದ್ದ ರಿವಾಲ್ವರ್ ಹೊತ್ತೈದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಎದುರುಗಡೆಯಿರುವ ಶ್ರೀ ವೀರಭದ್ರ ದೇವಸ್ಥಾನದ ಹಿಂಭಾಗದಲ್ಲಿರುವ ಮನೆಯಲ್ಲಿ ಸೋಮವಾರ ಬೆಳಗಿನ ಜಾವ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಬಿಜೆಪಿ ಮುಖಂಡ ನಾಗರಾಜ ನಾಯ್ಕ ಅವರ ಸಹೋದರರಾಗಿರುವ ತರಕಾರಿ ವರ್ತಕ ಸಂತೋಷ ನಾಯ್ಕ ಅವರ ಬಾಡಿಗೆ ಮನೆಯಲ್ಲಿಯೇ ಈ ಕಳ್ಳತನ ನಡೆದಿದೆ. ಅವರು ನಿನ್ನೇ ರಾತ್ರಿ ತಮ್ಮ ಬಾಡಿಗೆ […]

ಅಪರಾಧ

ಕೊಡಗು : ಗಾಂಜಾ ಮಾರಾಟ ಮಾಡುತ್ತಿದ್ದ 6 ಮಂದಿ ಅರೆಸ್ಟ್

ಕೊಡಗು prajakiran.com : ಚೆಟ್ಟಳ್ಳಿ ಬಳಿಯ ಪ್ರೌಢಶಾಲಾ ಮೈದಾನ ಪಕ್ಕದ ಸಾವ೯ಜನಿಕ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ  ಸಂದಭ೯ದಲ್ಲಿ ಕೊಡಗು ಪೊಲೀಸ್ ಅಪರಾಧ ಪತ್ತೆ ದಳ ದಾಳಿ ನಡೆಸಿ ಗಾಂಜಾ ಗ್ಯಾಂಗನ ಆರು ಜನರನ್ನು ಪತ್ತೆ  ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂಡ ಕಳೆದ ಹಲವು ದಿನಗಳಿಂದ ಈ ದಂಧೆಯನ್ನು ರಾಜಾರೋಷವಾಗಿ ನಡೆಸುತ್ತಿತ್ತು ಎಂದು ತಿಳಿದುಬಂದಿದೆ. ಅವರನ್ನು ಬಂಧಿಸಿ, ಹೆಡೆ ಮುರಿಕಟ್ಟಿದ್ದಾರೆ. ಬಂಧಿತರನ್ನು ಮೈಸೂರಿನ ಆನಂದ,ವಿರಾಜಪೇಟೆಯ ಮೊಗರಗಲ್ಲಿ ನಿವಾಸಿ ಖಲೀಲ್, ವಾಲ್ನೂರು ತ್ಯಾಗತ್ತೂರಿನ ಕೆ.ಎಸ್.ಫರೀದ್, ಚೇರಳ […]

ಅಪರಾಧ

ಧಾರವಾಡದಲ್ಲಿಅಪ್ರಾಪ್ತೆಯ ಸಂಶಯಾಸ್ಪದ ಸಾವು

ಧಾರವಾಡ prajakiran.com : ಅಪ್ರಾಪ್ತೆಯೊಬ್ಬಳು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ. ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಹೀಗಾಗಿ ಆಕೆಯನ್ನು ಕೊಲೆ ಮಾಡಿರೋ ಶಂಕೆಯಿದೆ ಎಂದು ಬಾಲಕಿಯ ಕುಟುಂವದವರು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಅತ್ತೆ ಮಗನ ಮೇಲೆಅತ್ಯಚಾರಹಾಗೂ ಕೊಲೆ ಆರೋಪ ಮಾಡಿದ್ದು,ಆತನಿಗೆ ಆತನ ತಾಯಿ ಸಹಕಾರ ನೀಡಿದ್ದಾರೆ ಎಂದು ದೂರಿದ್ದಾರೆ.  ಮೃತ ಬಾಲಕಿಯ ಲಕ್ಷ್ಮಿ ಭಜಂತ್ರಿ(೧೬) ಎಂದು ಗುರುತಿಸಲಾಗಿದೆ. ಈಕೆ ಸವದತ್ತಿ ತಾಲೂಕಿನ ಸತ್ತಗೇರಿ […]

ಅಪರಾಧ

ಯುವತಿಗೆ 15 ಲಕ್ಷ ಪಂಗನಾಮ ಹಾಕಿದ ಜ್ಯೋತಿಷಿ

ಬೆಂಗಳೂರು prajakiran.com : ನಿಮ್ಮ ಕುಟುಂಬಕ್ಕೆ ಕಂಟಕವಿದೆ.ಅದರ ಪರಿಹಾರಕ್ಕೆ ಪೂಜೆ ಮಾಡಿಸಬೇಕು ಎಂದು ಯುವತಿಯನ್ನು ನಂಬಿಸಿದ್ದ ಜ್ಯೋತಿಷಿಯೊಬ್ಬ, ಹಂತಹಂತವಾಗಿ 15 ಲಕ್ಷ ರೂ. ಪಡೆದು ವಂಚಿಸಿದ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸುಬ್ಬನಪಾಳ್ಯ ನಿವಾಸಿ 28 ವರ್ಷದ ಯುವತಿ ವಂಚನೆಗೊಳಗಾದವರು ಎಂದು ತಿಳಿದುಬಂದಿದೆ. ಈಕೆ ಕೊಟ್ಟ ದೂರಿನ ಮೇರೆಗೆ ಅಪರಿಚಿತ ಜ್ಯೋತಿಷಿಯ ವಿರುದ್ಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಯುವತಿ ಏಪ್ರಿಲ್‌ನಲ್ಲಿ ಭವಿಷ್ಯ ಕೇಳುವ ಸಲುವಾಗಿ […]

ಅಪರಾಧ

ಮನೆಯಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದ ಅಂತರ ಜಿಲ್ಲಾ ಡಕಾಯಿತರ ಬಂಧನ :

 ಕೊಡಗು prajakiran.com : ಇತ್ತೀಚೆಗೆ ಕೊಡುಗು ಜಿಲ್ಲೆಯ ನಾಗರಿಕರಿಗೆ ಆತಂಕಜ ಮೂಡಿಸಿದ್ದವಿರಾಜಪೇಟೆಯ    ದರೋಡೆ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ  ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ 21 ರಂದು ರಾತ್ರಿ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿ ಮನೆಯಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ನಡೆಸಿದ್ದ ಈ ಪ್ರಕರಣ ಜಿಲ್ಲೆಯ ಜನರಿಗೆ ಭಯ ಉಂಟುಮಾಡಿತ್ತು. ಈ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡವು ಜೂನ್ 9ರಂದು  ಎಮ್ಮೆ ಮಾಡು ನಿವಾಸಿಯಾದ ಇಬ್ರಾಹಿಂ  ಖಲೀಲ್ […]

ಅಪರಾಧ

ಬೈಕ್ ಖರೀದಿಸಲು ಹೋದ ಧಾರವಾಡ ಯುವಕ ಭೀಕರ ಅಪಘಾತಕ್ಕೆ ಬಲಿ

ಧಾರವಾಡ Prajakiran.com : ಬೈಕ್ ಖರೀದಿ ಮಾಡಲು ಹೋದ ಯುವಕನೊಬ್ಬ ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ಭಾನುವಾರ ನಡೆದಿದೆ.                                                                ಯಲ್ಲಾಪೂರದ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಜಯನಗರದ ಕಿರಣ (35) ಎನ್ನುವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವಕ ಸಾವನ್ನಪ್ಪಿದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ (IBM)ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿರಣ ಹವ್ಯಾಸಿ ಛಾಯಾಗ್ರಾಹಕ ನಾಗಿದ್ದ.  ಅಪಘಾತ ಹಿನ್ನೆಲೆಯಲ್ಲಿ  ಲಾರಿ ವಶಕ್ಕೆ ಪಡೆದು ಚಾಲಕ ಸಾತಪ್ಪನ್ನು ಪೊಲೀಸರು ಬಂಧಿಸಿದ್ದಾರೆ. […]

ಅಪರಾಧ

ಸಾಲಭಾದೆ ತಾಳಲಾರದೆ ಧಾರವಾಡ ಜಿಲ್ಲೆಯ ನೇಕಾರ ಆತ್ಮಹತ್ಯೆ

ಧಾರವಾಡ Prajakiran.com : ಸಾಲಭಾದೆ ತಾಳಲಾರದೆ ನೇಕಾರನೊಬ್ಬ ನೇಣಿಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಜರುಗಿದೆ. ಚಂದ್ರಕಾಂತ ತಾವರೇನವರ 45 ವಯಸ್ಸಿನ ಈತ ನೇಕಾರಿಕೆ ಮಾಡುತ್ತಿದ್ದ. ಲಾಕಡೌನ ಹಿನ್ನಲೆಯಲ್ಲಿ ಸಾಲದ ಬಾಧೆಯನ್ನು ತಾಳಲಾರದೆ ಬಡತನದ ಬೇಗೆಗೆ ಬಳಲಿ ನೊಂದುಕೊಂಡಿದ್ದನು. ಕಳೆದ ರಾತ್ರಿ ಕುಟುಂಬಸ್ಥರು ಅನ್ಯ ಗ್ರಾಮಕ್ಕೆ ತೆರಳಿದ ಸಮಯದಲ್ಲಿ  ಮನೆಯಲ್ಲಿಯೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share on: WhatsApp