ಅಪರಾಧ

ಧಾರವಾಡದಲ್ಲಿ ಮಗನಿಗೆ ಕಾಡಿಸಬೇಡಿ ಎಂದ ತಂದೆಗೂ ಹಲ್ಲೆ ಮಾಡಿದ ಕಿರಾತಕರು ..!

ಧಾರವಾಡ prajakiran.com : ಮಗನಿಗೆ ಕಾಡಿಸಬೇಡಿ ಎಂದು ಬುದ್ದಿ ಹೇಳಲು ಹೋದ ತಂದೆಗೆ ಹಾಗೂ ಮಗನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಗುವೊಂದು ಸೈಕಲ್ ತೆಗೆದುಕೊಂಡು ಧಾರವಾಡದ ಶಿವಾನಂದ ನಗರದಲ್ಲಿ ಮುಕ್ತುಂ ಸೊಗಲದ ಮನೆಯ ಮುಂದೆ ಓಡಾಡಿದ್ದ. ಆಗ ಹುಡುಗನ ಸೈಕಲ್ ಚಾವಿ ಕಸೆದುಕೊಂಡು ಈ ಹುಡುಗರು ಕಪಾಳಕ್ಕೆ ಹೊಡೆದಿದ್ದರು. ಹಲ್ಲೆಗೊಳಗಾದ ಮಗು ಈ ವಿಷಯವನ್ನು ತನ್ನ ತಂದೆಯ ಗಮನಕ್ಕೆ ತಂದಿದ್ದ. ಇದನ್ನು ಪ್ರಶ್ನಿಸಿ ಬುದ್ದಿ ಹೇಳಲು ಹೋದ […]

ಅಪರಾಧ

ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ prajakiran.com : ತಾನು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಧಿತರನ್ನು ಹುಬ್ಬಳ್ಳಿಯ ಸುಳ್ಳ ರಸ್ತೆಯ ಬಸವೇಶ್ವರ ಪಾರ್ಕ್ ನ ಸುನೀಲ ಚಂದ್ರಶೇಖರ ಶಲವಡಿ ಹಾಗೂ ಪುನೀತಕುಮಾರ ಚಂದ್ರಶೇಖರ ಶಲವಡಿ ಎಂದು ಗುರುತಿಸಲಾಗಿದೆ. ಇವರು ಮೇ 23ರಂದು ಹುಬ್ಬಳ್ಳಿ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್ ಐ ಎಸ್ ಎಸ್ ದೇಸಾಯಿಅವರಿಗೆ ವಾಹನ ತಪಾಸಣೆ ವೇಳೆ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದನ್ನು ಸುನೀಲ […]

ಅಪರಾಧ

ಬೆಂಗಳೂರಿನ ರೌಡೀಶೀಟರ್ ಹಿದಾಯತ್ ಖಾನ್ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು prajakiran.com :  ರೌಡೀಶೀಟರ್ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬಳಿ ಸಂಜೆ 4:30ರ ಸುಮಾರಿಗೆ  ಈ ಮಾರಣಾಂತಿಕ ಹಲ್ಲೆ ನಡೆದಿದೆ. ಡಿ.ಜೆ ಹಳ್ಳಿ ನಿವಾಸಿ ಹಿದಾಯತ್ ಖಾನ್ ಎಂಬಾತನೇ ಹಲ್ಲೆಗೊಳಗಾದ ರೌಡೀಶೀಟರ್ ಆಗಿದ್ದಾನೆ. ಮೂರು ನಾಲ್ಕು ಜನರ ದುಷ್ಕರ್ಮಿಗಳ ತಂಡದಿಂದ ಹಲ್ಲೆ ನಡೆದಿದ್ದು. ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಲಾಗಿದೆ. ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ಹಿದಾಯತ್ ಖಾನ್ ಕೈ, ಕಾಲು ಮುಖವೆಲ್ಲಾ […]

ಅಪರಾಧ

ಲಾಕ್ ಡೌನ್ ಎಫೆಕ್ಟ್ : ಸಾಲಭಾದೆ ತಾಳಲಾರದೇ ಬಾಗಲಕೋಟೆ ಜಿಲ್ಲೆಯ ಲಾರಿ ಚಾಲಕ ಆತ್ಮಹತ್ಯೆ

ಹುಬ್ಬಳ್ಳಿ prajakiran.com : ಲಾಕ್ ಡೌನ್ ಎಫೆಕ್ಟ್ ನಿಂದ ಉಂಟಾದ ನಿರುದ್ಯೋಗ ಸಮಸ್ಯೆ ಹಾಗೂ ಸಾಲಭಾದೆ ತಾಳಲಾರದೇ ಲಾರಿ ಚಾಲಕನೊಬ್ಬ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ವಿಜಯಪುರ ರಸ್ತೆಯ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರೇವಡಿಹಾಳ ಗ್ರಾಮದ ದುರ್ಗೇಶ ರಾಮಪ್ಪ ದೊಡ್ಡಮನಿ(೨೪) ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು ಎಂದು ಗೊತ್ತಾಗಿದೆ. ಲಾರಿ ಚಾಲಕನಾಗಿದ್ದ ಈತ ಲಾಕ್ ಡೌನ್ ಪರಿಣಾಮದಿಂದ ನಿರುದ್ಯೋಗಿ ಆಗಿದ್ದ. ಇದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ. […]

ಅಪರಾಧ

ವಾಯುವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರ ದಾರುಣ ಸಾವು : ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್

ಬೆಳಗಾವಿ prajakiran.com :  ಊಟ ಮುಗಿಸಿ ವಾಯು ವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೃತ ಮಹಿಳೆಯರನ್ನು ಸವಿತಾ ಪಾಟೀಲ್ (45), ವಿದ್ಯಾ ಪಾಟೀಲ್   (47) ಎಂದು ಗುರುತಿಸಲಾಗಿದೆ. ಶಾಂತಾ ಕೃಷ್ಣ ಚೌಗುಲೆ (55) ಗಾಯಾಳು ಎಂದು ಗುರುತಿಸಲಾಗಿದೆ.  ಮೇ 24ರಂದು ಭಾನುವಾರ ರಾತ್ರಿ 11.30 ಕ್ಕೆ ಮುತಗಾ ಸಮೀಪ ಈ ಅಪಘಾತ ನಡೆದಿದ್ದು, ಬಿಜೆಪಿ ಯುವ ಮೋರ್ಚಾ ಮುಖಂಡ ಯುವರಾಜ […]

ಅಪರಾಧ

ಪ್ರವಾಸಕ್ಕೆ ಕರೆದುಕೊಂಡು ಹೋಗದಕ್ಕೆ ಯುವತಿ ಆತ್ಮಹತ್ಯೆ

ಹುಬ್ಬಳ್ಳಿ prajakiran.com : ತಾಯಿ ಪ್ರವಾಸಕ್ಕೆ ಕರೆದುಕೊಂಡು ಹೋಗದಕ್ಕೆ ಮನನೊಂದ ಯುವತಿಯೊಬ್ಬಳ್ಳು ಮನೆಯ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಎಲಿಪೇಟೆ ಹೂಗಾರ ಓಣಿಯ ಲವಿಶಾ ರಾಜೇಶ ಬೋಹಾರಾ (19) ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಲವಿಶಾ ಪ್ರವಾಸಕ್ಕೆ ಹಠ ಹಿಡಿದಿದ್ದಳು. ಆದರೆ, ಲಾಕ್ ಡೌನ್ ನಿಂದಾಗಿ ಸಾಧ್ಯವಾಗಿರಲಿಲ್ಲ. ನಂತರ ಹೋಗೋಣ ಎಂದು ಸಮಾಧಾನ ಪಡಿಸಿದ್ದರು. ಆದರೆ ಲಾಕ್ ಡೌನ್ […]

ಅಪರಾಧ

ಮದುವೆ ವಿಳಂಬ ಮಾಡಿದ್ದಕ್ಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ…!

ಹುಬ್ಬಳ್ಳಿ prajakiran.com : ಕುಟುಂಬಸ್ಥರು ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಹುಬ್ಬಳ್ಳಿಯ ದೇವಾಂಗಪೇಟೆ ನಿವಾಸಿ ಶರಣಪ್ಪ ಫಕ್ಕೀರಪ್ಪ ಹಡಪದ(೨೯) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆ ಮಾಡಿಕೊಂಡ ಯುವಕನಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮನೆಯವರೆಲ್ಲ ಲಾಕ್‌ಡೌನ್ ಮುಗಿದ ನಂತರ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು.   ಇದರಿಂದ ಮನನೊಂದ ಶರಣಪ್ಪ ಮದುವೆ ಮಾಡಿ ಎಂದು ಕುಟುಂಬದ ಸದಸ್ಯರೊಂದಿಗೆ ಜಗಳ ಮಾಡಿಕೊಂಡು ಶನಿವಾರ ಸಂಜೆ ವೇಳೆ ಮನೆ ಬಿಟ್ಟು […]

ಅಪರಾಧ

ಕುಡಿದ ನಶೆಯಲ್ಲಿ ಹೆಂಡತಿ, ಮಗಳಿಗೆ ಬೆಂಕಿ ಹಚ್ಚಿದ  ಭೂಪ ಸಾವು

ಧಾರವಾಡ prajakiran.com : ಕುಡಿದ ನಶೆಯಲ್ಲಿ ಭೂಪನೊಬ್ಬ ಕಟ್ಟಿಕೊಂಡ ಹೆಂಡತಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದ ಘಟನೆ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಲಾಕ್ ಡೌನ್ ಹಿನ್ನಲೆಯಿಂದ ಕಳೆದ ಒಂದೂವರೆ ತಿಂಗಳಿಂದ ಮದ್ಯ ಮಾರಾಟ ನಿಷೇಧ ಮಾಡಿದ್ದ ಸರಕಾರ, ಆನಂತರ ನಿಷೇಧ ತೆರವು ಗೊಳಿಸಿತ್ತು. ಆದರೆ ಮದ್ಯ ಮಾರಾಟ ಮತ್ತೇ ಆರಂಭವಾದ ಬೆನ್ನಲ್ಲೇ ಕುಡಿದ ನಶೆಯಲ್ಲಿ ಕುಡುಕ  ಕಿತಾಪತಿ ಮಾಡಿದ್ದಾನೆ. ಮನೆಯಲ್ಲಿ ಮಲಗಿದ್ದ ಹೆಂಡತಿ, ಮಗಳಿಗೆ ಬೆಂಕಿ ಹಚ್ಚಿ ತಾನೂ ಕೂಡ ನಶೆಯಲ್ಲಿ […]

ಅಪರಾಧ

ಹುಬ್ಬಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಬಲಿ

ಹುಬ್ಬಳ್ಳಿ prajakiran.com :  ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಹುಬ್ಬಳ್ಳಿ ತಾಲೂಕು ಕುಸುಗಲ್ಲ ಗ್ರಾಮದ ಇಂಗಳಹಳ್ಳಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಮೃತರನ್ನು ಕುಸುಗಲ್ ಗ್ರಾಮದ ಉಸ್ಮಾನಸಾಬ ಖಾದರಸಾಬ ಡಂಬಳ (30) ಹಾಗೂ ಅಭಿಷೇಕ ಸಿದ್ದಪ್ಪ ಈರಣ್ಣವರ (16) ಎಂದು ಗುರುತಿಸಲಾಗಿದೆ. ಅಬ್ದುಲ್ ಕಡೇಮನಿ (69) ಎಂಬುವರೇ ಗಾಯಗೊಂಡಿದ್ದಾರೆ. ಕುಸುಗಲ್ ಗ್ರಾ.ಪಂ ವಾರ್ಡ್ ನಂ4 ರ ಸದಸ್ಯೆ ಲಕ್ಷ್ಮೀಭಾಯಿ ಈರಣ್ಣವರ ಏಕೈಕ ಪುತ್ರನಾಗಿದ್ದ ಅಭಿಷೇಕ್, ಬೆಳಿಗ್ಗೆ […]