ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 52 ಕುಸ್ತಿ ಪಟುಗಳು 5 ಮಹಿಳಾ ಜೋಡಿಗಳು ಭಾಗಿ ಧಾರವಾಡ prajakiran. com : ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಭಾರಿ ಜಂಗಿ ನಿಕಾಲಿ ಕುಸ್ತಿ ನಡೆಯಿತು. ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು 52 ಪುರುಷ ಜೋಡಿಗಳು, 5 ಜೋಡಿ ಮಹಿಳೆಯರು […]
ಕ್ರೀಡೆ
ಧಾರವಾಡದ ಪ್ರಿಯಾಂಕಾ 19ನೇ ISF ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆ : ಆಥಿ೯ಕ ಸಹಾಯ ನೀಡಲು ಮನವಿ
ಧಾರವಾಡ prajakiran.com : ಪ್ರಿಯಾಂಕಾ ಓಲೇಕಾರ ಧಾರವಾಡದ ಅತ್ಯುತ್ತಮ ಕ್ರೀಡಾಪಟು ಆಗಿದ್ದು, ಅವಳು ಫ್ರಾನ್ಸ್ನ ನಾರ್ಮಂಡಿಯಲ್ಲಿ ನಡೆಯುತ್ತಿರುವ 19ನೇ ISF ವರ್ಲ್ಡ್ ಸ್ಕೂಲ್ ಜಿಮ್ನಾಸೈಡ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಮೇ 14 ರಿಂದ 22 ರವರೆಗೆ ನಡೆಯಲಿರುವ 800 ಮೀ. ಓಟದಲ್ಲಿ ಆಯ್ಕೆಯಾಗಿ ಪ್ರಿಯಂಕಾ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ. ಹೀಗಾಗಿ ಆಥಿ೯ಕ ಸಹಾಯ ನೀಡಿ ಪ್ರೋತ್ಸಾಹಸಿ ಎಂದು ಸಾರ್ವಜನಿಕರಲ್ಲಿ ಧಾರವಾಡದ ಹಿರಿಯ ಕ್ರೀಡಾಪಟು ಆಗಿರುವ ಜಿಲ್ಲಾ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿವು ಹಿರೆಮಠ ವಿನಂತಿ ಮಾಡಿದರು. ಅವರು ಪತ್ರಿಕಾ ಗೋಷ್ಠಿಯಲ್ಲಿ […]
ಧಾರವಾಡದ ಕುಸ್ತಿಪಟು ರಫೀಕ್ ಮುಡಿಗೆ ಚಿನ್ನದ ಪದಕ
ಧಾರವಾಡ prajakiran. com : ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಸಿದ 2022ನೇ ಸಾಲಿನ ಫೆಡರೇಷನ್ ಕಪ್ (ಸೀನಿಯರ್) ಫ್ರೀಸ್ಟೈಲ್, ಗ್ರೀಕೊರೋಮನ್ ಚಾಂಪಿಯನ್ಶಿಪ್ನ ಧಾರವಾಡ ಮೊಹ್ಮದ್ ರಫೀಕ್ ಹೊಳಿ ಚಿನ್ನದ ಪದಕ ಗೆದ್ದಿದ್ದಾರೆ. ಗ್ರೀಕೋ ರೋಮನ್ ವಿಭಾಗದಲ್ಲಿ ರಫೀಕ್, 77 ಕೆಜಿ ವರ್ಗದಲ್ಲಿ ಚಿನ್ನದ ಪದಕ ಗೆದ್ದರು. ಈ ಸ್ಪರ್ಧೆಯ್ಲಿ ರಫೀಕ್ ಭಾರತೀಯ ಸೇನೆಯ ಎಸ್ಎಸ್ಬಿಸಿ ತಂಡವನ್ನು ಪ್ರತಿನಿಧಿಸಿದ್ದರು. ಫೈನಲ್ನಲ್ಲಿ ಅವರು ಹರಿಯಾಣದ ಸೋನು ಅವರನ್ನು 7-3ರಿಂದ ಮಣಿಸಿ ಗೆಲುವಿನ ನಗೆ ಬೀರಿದರು. Share on: WhatsApp
ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗಳಿಸಿದ ನವಲಗುಂದ ಶಿಕ್ಷಕಿ ಸರಸ್ವತಿ ಸುಣಗಾರ
ಧಾರವಾಡ prajakiran.com ಮಾ.31: ಚಂಡಿಗಡದಲ್ಲಿ ಇಚೆಗೆ ಜರುಗಿದ ಸರಕಾರಿ ನೌಕರರ ರಾಷ್ಟ್ರೀಯ ಮಟ್ಡದ ಕುಸ್ತಿ ಪಂದ್ಯಾವಳಿಯಲ್ಲಿ ಶಿಕ್ಷಕಿ ಸರಸ್ವತಿ ಅವರು ಭಾಗವಹಿಸಿ, ಪ್ರಶಸ್ತಿ ಗಳಿಸಿದ್ದಾರೆ. ಪ್ರಸ್ತುತ ಜಿಲ್ಲೆಯ ನವಲಗುಂದ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಧಾಲೆ-04 ರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸರಸ್ವತಿ ಲಕ್ಷ್ಮಣ ಸುಣಗಾರ ಅವರು ಸರಕಾರಿ ನೌಕರರ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದ್ದರು. ಇಚೆಗೆ ಚಂಡಿಗಡದಲ್ಲಿ ಜರುಗಿದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ 50 ಕೆ.ಜಿ ತೂಕದ ಕುಸ್ತಿ ವಿಭಾಗದಲ್ಲಿ […]
ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಇನ್ನು ನೆನಪು ಮಾತ್ರ…..!
ಮೆಲ್ಬೋರ್ನ್ prajakiran. com : ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ ಹೊಂದಿದರು. ಈ ಬಗ್ಗೆ ಆಸ್ಟ್ರೇಲಿಯಾದ ಫಾದಕ್ಸ್ ಕ್ರಿಕೆಟ್ ವರದಿ ಮಾಡಿದ್ದು, ಥಾಯ್ಲೆಂಡ್ನಲ್ಲಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ನೀಡಿದೆ. ಥಾಯ್ಲೆಂಡ್ನ ವಿಲ್ಲಾವೊಂದರಲ್ಲಿ ಶೇನ್ ವಾರ್ನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಎಲ್ಲಾ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಕೂಡ ಅವರು ಬದುಕುಳಿಯಲಿಲ್ಲ ಎಂದು ವಾರ್ನ್ ಆಪ್ತ ವಲಯ ತಿಳಿಸಿದೆ. ಸರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಆಗಿದ್ದ ಶೇನ್ ವಾರ್ನ್ ಕ್ರಿಕೆಟ್ […]
ಧಾರವಾಡ ಪ್ರೀಮಿಯರ್ ಲೀಗ್ ಇಂಡಿಯನ್ ಸೋಲ್ಜರ್ಸ್ ಭರ್ಜರಿ ಗೆಲುವು : ಕಮಲಾಪುರ ಕೇಸರಿ ರನ್ನರ್ ಅಪ್
ಧಾರವಾಡ prajakiran.com : ಧಾರವಾಡ ಜಿಲ್ಲೆಯ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಪ್ರೀಮಿಯರ್ ಲೀಗ್ (ಡಿಪಿಎಲ್) ಪಂದ್ಯಾವಳಿಯಲ್ಲಿ ನಿತಿನ್ ಇಂಡಿ ಹಾಗೂ ರತ್ನಾಕರ ಶೆಟ್ಟಿ ಮಾಲಿಕತ್ವದ ಇಂಡಿಯನ್ ಸೋಲ್ಜರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಇಂಡಿಯನ್ ಸೋಲ್ಜರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು 8 ಓವರ್ ನಲ್ಲಿ 84 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತು. 8 ಓವರ್ ನಲ್ಲಿ 84 ಗುರಿ ಬೆನ್ನತ್ತಿದ್ದ ಕಮಲಾಪುರ ಕೇಸರಿ 8 ಓವರ್ ನಲ್ಲಿ […]
ಧಾರವಾಡದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ 3 ಕಿ.ಮೀ. ನಡಿಗೆ, 5 ಕಿ.ಮೀ ಓಟ
ಧಾರವಾಡ prajakiran. com : ವಿಶ್ವ ಮಧುಮೇಹ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐ.ಎಂ.ಎ.) ಧಾರವಾಡ ಘಟಕದ ವತಿಯಿಂದ ನಗರದಲ್ಲಿ ರವಿವಾರ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ನಡಿಗೆ ಮತ್ತು ಓಟ ಹಮ್ಮಿಕೊಳ್ಳಲಾಗಿತ್ತು. ಮಧುಮೇಹ ಕಾಯಿಲೆ ಹಾಗೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ೩ ಕಿ.ಮೀ. ನಡಿಗೆ ಮತ್ತು ೫ ಕಿ.ಮೀ ಓಟ ಹಮ್ಮಿಕೊಳ್ಳಲಾಗಿತ್ತು. ನಗರದ ಐ.ಎಂ.ಎ. ಸಭಾಭವನದಿಂದ ಬೆಳಗ್ಗೆ ಆರಂಭವಾದ ನಡಿಗೆ ಮತ್ತು ಓಟವು ಸಪ್ತಾಪೂರ ಬಾವಿ ಮೂಲಕ ಶ್ರೀನಗರ […]
ಖೇಲೋ ಇಂಡಿಯಾ ಟೀಮ್ಗೆ ಆಯ್ಕೆಯಾದ ಕೂಲಿ ಕಾರ್ಮಿಕನ ಮಗಳು ಪವಿತ್ರಾ ಕುರ್ತಕೋಟಿ ಸಾಧನೆಯ ಹಾದಿ
ಗದಗ prajakiran.com : ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಶ್ರೀ ಅಶೋಕ್ ಮತ್ತು ಶ್ರೀಮತಿ ರೇಣುಕಾ ದಂಪತಿ ಮಗಳಾದ ಕು. ಪವಿತ್ರಾ ಕುರ್ತಕೋಟಿ ಇವರು, 5 ನೇ ತರಗತಿಗೆ ಸೈಕ್ಲಿಂಗ್ ಕ್ರೀಡೆಯಲ್ಲಿ ಪ್ರವೇಶ ಪಡೆದು ಪ್ರಥಮ ಪಿಯುಸಿ ಗೆ ವಿಡಿಎಫ್ಟಿ ಬಾಲಕಿಯರಕಾಲೇಜಿನಲ್ಲಿ ಓದುತ್ತಿದ್ದಾರೆ. ತಂದೆ ರೈತ ಕಾರ್ಮಿಕರಾಗಿದ್ದು, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿದ್ದಾರೆ. ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕು. ಪವಿತ್ರ ಅವರಿಗೆ ಮೊದಲಿನಿಂದಲೂ ಸೈಕ್ತಿಂಗ್ನಲ್ಲಿ ಆಸಕ್ತಿ. ಆದರೆ […]
ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕು.ಪವಿತ್ರಾ ಕುರ್ತಕೋಟಿಗೆ ಮುಖ್ಯಮಂತ್ರಿಗಳಿಂದ ಸೈಕಲ್ ಪ್ರದಾನ
ಬೆಂಗಳೂರು prajakiran.com ಸೆ 24: ಗದಗ ಜಿಲ್ಲೆಯ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕುಮಾರಿ ಪವಿತ್ರಾ ಕುರ್ತಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೈಕಲ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಪಟುವಾಗಿರುವ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ಟಿ.ವಿ.9 ಸಂದರ್ಶನದ ಸಂದರ್ಭದಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು. ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಯೋಜನಾ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ […]
ಭಾರತೀಯ ಮಹಿಳಾ ಹಾಕಿ ತಂಡದ ಕನ್ನಡತಿ ಕೋಚ್ ಅಂಕಿತಾಗೆ ಸನ್ಮಾನ
ಬೆಂಗಳೂರು prajakiran.com : ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕೋಚ್ ಕನ್ನಡತಿ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಆ ಮಹಿಳಾ ತಂಡ ಗೆದ್ದಿದೆ. ಆ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ […]