ಧಾರವಾಡ ಪ್ರಜಾಕಿರಣ. ಕಾಮ್ : ತಾಲೂಕಿನ ಗರಗ ಗ್ರಾಮದಲ್ಲಿ ಇಸ್ಪೀಟು ಜೂಜಾಡುತ್ತಿದ್ದ ಹದಿನಾರು ಜನರನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಗರಗ ಗ್ರಾಮದ ಸಾರ್ವಜನಿಕ ಜಾಗೆಯಲ್ಲಿ ಇಸ್ಪೀಟು ಆಡುತ್ತಿದ್ದ ಸಮಯದಲ್ಲಿ ದಾಳಿ ನಡೆಸಿ 16 ಜನರನ್ನು ಬಂಧಿಸಿದ್ದಾರೆ. ಆರೋಪಿತರಿಂದ 33,000 ರೂಪಾಯಿ ನಗದು ಮತ್ತು ಜೂಜಾಟ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಿಪಿಐ ಸಮೀರ ಮುಲ್ಲಾ ಅವರ ನೇತೃತ್ವದಲ್ಲಿ ಪಿಎಸ್ ಐ ಪ್ರಕಾಶ ಡಿ. ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಈ […]
ಅಪರಾಧ
ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಸವಾರ ಸಾವು….!
ಧಾರವಾಡ ಪ್ರಜಾಕಿರಣ.ಕಾಮ್ : ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ ಪ್ರಕರಣ ತಾಲೂಕಿನ ಬೇಲೂರು ಬಳಿ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಕಿತ್ತೂರು ತಾಲೂಕಿನ ಹೊಳೆ ನಾಗಲಾಪೂರ ಗ್ರಾಮದ ಕರೆಪ್ಪನವರ (22) ಮೃತಪಟ್ಟ ಯುವಕ. ಕಿತ್ತೂರ ನಮನ ಕಡೆಯಿಂದ ಧಾರವಾಡ ಕಡೆಗೆ ಬೈಕ್ ಮೇಲೆ ಬರುತ್ತಿದ್ದ ಸಂದರ್ಭದಲ್ಲಿ ಬೇಲೂರು ಗ್ರಾಮದ ಬಳಿಯ ಮುಲ್ಲಾ ಡಾಬಾ ಬಳಿ ನಿಂತಿದ್ದ ಲಾರಿಗೆ ಬೈಕ್ ಹಿಂದಿನಿಂದ ಡಿಕ್ಕಿ […]
ಧಾರವಾಡ : ನೋವಿನಲ್ಲೂ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು
*ಧಾರವಾಡದ ತೇಜಸ್ವಿನಗರ ಬಳಿ ಬೈಕ್ ಗಳ ನಡುವೆ ಅಪಘಾತ* *ತಂದೆ ಸಾವು, ಜೊತೆಗಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು* *ನೋವಿನಲ್ಲೂ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ತೇಜಸ್ವಿನಗರ ಬಳಿ ನಿನ್ನೆ ರಾತ್ರಿ ನಡೆದ ಬೈಕ್ ಗಳ ಅಪಘಾತದಲ್ಲಿ ತಂದೆಯೊಬ್ಬ ಸಾವಿಗೀಡಾಗಿದ್ದು, ಅವರ ಜೊತೆಗಿದ್ದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗವಾಗಿ ಬಂದ ಬೈಕ್ ತಂದೆ-ಮಕ್ಕಳಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಅದರ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಧಾರವಾಡದ ಸಂಗೊಳ್ಳಿ […]
ಹುಬ್ಬಳ್ಳಿಯಲ್ಲಿ ಲಾರಿ ಡಿಕ್ಕಿ ಹೊಡೆದು ವಾಣಿಜ್ಯ ತೆರಿಗೆ ಇಲಾಖೆ ಚಾಲಕ ಸ್ಥಳದಲ್ಲಿಯೇ ಸಾವು
ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಹೊರವಲಯದ ರಿಂಗ್ ರೋಡ್ನಲ್ಲಿರುವ ಮಂಟೂರ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಚಾಲಕ ರಫೀಕ್ ನದಾಫ್ ಸಾವನ್ನಪ್ಪಿದ ನತದೃಷ್ಟನಾಗಿದ್ದಾನೆ. ಇದೇ ವೇಳೆ ವಾಹನದಲ್ಲಿದ್ದ ಸಹಾಯಕ ಆಯುಕ್ತ ಶ್ರೀಶೈಲ ದೊಡ್ಡಮನಿ ಹಾಗೂ ಇಲಾಖೆಯ ಇನ್ಸಪೆಕ್ಟರ್ ಈಶ್ವರ ಸುಧೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿನಿತ್ಯದಂತೆ ಇಂದು ಲಾರಿಯೊಂದರ ಪತ್ರಗಳನ್ನ ನೋಡಲು ವಾಹನ ನಿಲ್ಲಿಸಲಾಗಿತ್ತು. ಮುಂದೆ […]
ಧಾರವಾಡ : ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ : ಇಬ್ಬರು ಸ್ಥಳದಲ್ಲಿ ಸಾವು….!
ಧಾರವಾಡ ಪ್ರಜಾಕಿರಣ.ಕಾಮ್ : ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟು, ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೋಟೂರ ಕ್ರಾಸ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ. ಕಾರಿನಲ್ಲಿದ್ದ ವಿನಯ ದೊಡ್ಡವೀರಯ್ಯ ಹಿರೇಮಠ (37) ಮತ್ತು ಸಂದೀಪ ಕುರವತ್ತೆಪ್ಪ (34) ಮೃತರು. ಕಿರಣ ಪ್ಯಾಟಿಮಠ ಘಟನೆಯಲ್ಲಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಮೂವರು ಧಾರವಾಡದ ಚನ್ನಬಸವೇಶ್ವರ ನಗರದ ನಿವಾಸಿಗಳು. ಮೃತಪಟ್ಟಿರುವ […]
ಧಾರವಾಡದಲ್ಲಿ ಹಾಡುಹಗಲೇ ಚಾಕು ಇರಿತ, ಮೂವರಿಗೆ ಗಾಯ : ಕೆಲವೇ ಗಂಟೆಗಳಲ್ಲಿ ಇಬ್ಬರು ಪೊಲೀಸ್ ವಶಕ್ಕೆ
*ಧಾರವಾಡದಲ್ಲಿ ಹಾಡುಹಗಲೇ ಚಾಕು ಇರಿತ* *ಮೂವರಿಗೆ ಗಾಯ, ಹುಬ್ಬಳ್ಳಿ ಕಿಮ್ಸ್ ಗೆ ದಾಖಲು*…! *ಕೆಲವೇ ಗಂಟೆಗಳಲ್ಲಿ ಇಬ್ಬರು ಪೊಲೀಸ್ ವಶಕ್ಕೆ* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಪ್ರಮುಖ ಹಾಗೂ ಜನನೀಬಿಡ ರಸ್ತೆಯಾದ ಕರ್ನಾಟಕ ಕಾಲೇಜ್ ರಸ್ತೆಯಲ್ಲಿ ಹಾಡಹಗಲೇ ಎರಡು ಗುಂಪು ಹೊಡೆದಾಡಿಕೊಂಡ ಪರಿಣಾಮ ಕೆಲಕಾಲ ಪರಿಸ್ಥಿತಿ ಬಿಗಡಾಯಿಸಿತ್ತು. ಅಲ್ಲದೆ, ಈ ವೇಳೆ ಚಾಕು ಇರಿತವಾಗಿದ್ದು, ಮೂವರು ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಿರಣ ಸಾಕೀನ ಮುಗದ ಹಾಗೂ ಆಸೀಫ್ ಶಾನವಾಜ್ @ ಶಾನು ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರಿಗೆ […]
ಧಾರವಾಡದಲ್ಲಿ ಬಡ್ಡಿ ದಾಹಕ್ಕೆ ಬಿತ್ತು ಬಡವನ ಹೆಣ*….!?
*ಆನಂದ ಪಾಸ್ತೆಯ ಬಡ್ಡಿ ದಾಹಕ್ಕೆ ಬಿತ್ತು ಬಡವನ ಹೆಣ*….!? *ಕರೆಪ್ಪ ಗುಳೆಣ್ಣವನರ್ ಹೆಸರಿಗೆ ಖರೀದಿ ಕರಾರು ಪತ್ರ* *ಗುಂಡಾಗಳ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ಬಡಪಾಯಿ ನಿಂಗರಾಜು* *ಮೀಟರ್ ಬಡ್ಡಿಕುಳಗಳಿಗೆ ಕಡಿವಾಣ ಹಾಕಲು ಬಡವರ ಮಗ ಬಸವರಾಜ ಕೊರವರ ಒತ್ತಾಯ* ಧಾರವಾಡ ಪ್ರಜಾಕಿರಣ.ಕಾಮ್ : ಆನಂದ ಪಾಸ್ತೆಯ ಹತ್ತು ಲಕ್ಷ ಬಡ್ಡಿದಾಹಕ್ಕೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾಗಿರಿ ಧಾರವಾಡದಲ್ಲಿ ನಡೆದಿದೆ. ಹತ್ತು ಲಕ್ಷಕ್ಕೆ ಹಲವಾರು ವರ್ಷ ಬಡ್ಡಿ ಹಣ ತೆಗೆದುಕೊಂಡು ಕರೆಪ್ಪ ಗುಳೆಣ್ಣವರ […]
ಮಗಳನ್ನು ಪೀಡಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ಅಪ್ಪ ಜೈಲು ಪಾಲು
ಧಾರವಾಡ ಪ್ರಜಾಕಿರಣ.ಕಾಮ್ : ಮಗಳನ್ನು ಪೀಡಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ಅಪ್ಪ ಇದೀಗ ಜೈಲು ಪಾಲಾಗಿದ್ದಾನೆ. ತಂದೆಗೆ ಮಕ್ಕಳು ಅಂದ್ರೆ ಸಾಕು ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಹೆಣ್ಣು ಮಕ್ಕಳು ಅಂದ್ರೆ ಪಂಚಪ್ರಾಣ. ಹೀಗಾಗಿ ಪಂಚಪ್ರಾಣವಾಗಿದ್ದ ಮಗಳ ಲೈಫ್ ಜೀವನದಲ್ಲಿ ಚೆಲ್ಲಾಟ ಆಡಲು ಹೋದವನ ಜೀವ ತೆಗೆಯಲು ಹೋದ ತಂದೆ ಹುಲಗಪ್ಪ ಬಡಿಗೇರ ಜೈಲು ಸೇರಿದ್ದಾನೆ. ಧಾರವಾಡದ ಸೈದಾಪುರ ನಿವಾಸಿ ಶಶಾಂಕ ಹಲ್ಲೆಗೊಳಗಾದ ಯುವಕ. ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ ತನ್ನದೇ ಏರಿಯಾದಲ್ಲಿದ್ದ ಹುಡುಗಿ ಜೊತೆ ಕಳೆದ […]
ಧಾರವಾಡ : ಮಗಳ ಬೆನ್ನ ಹಿಂದೆ ಬಿದ್ದ ಯುವಕನಿಗ ಚಾಕು ಹಾಕಿದ ತಂದೆ……!?
ಧಾರವಾಡ ಪ್ರಜಾಕಿರಣ.ಕಾಮ್ : ತನ್ನ ಮಗಳ ಬೆನ್ನ ಹಿಂದೆ ಬಿದ್ದ ಯುವಕನೊಬ್ಬನಿಗೆ ತಂದೆಯೊಬ್ಬ ಚಾಕು ಹಾಕಿದ ಘಟನೆ ಧಾರವಾಡದ ಸೈದಾಪುರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೈದಾಪುರ ಗೌಡರ ಓಣಿಯ ನಿವಾಸಿ ಶಶಾಂಕ ಮೂಗನ್ನವರ ಎಂಬ ಯುವಕನಿಗೆ ಸುತಗಟ್ಟಿ ಚಾಳನ ಹುಲಗಪ್ಪ ಬಡಿಗೇರ ಎಂಬಾತನೇ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಕರುಳು ಹೊರಬಂದಿವೆ ಎಂದು ಹೇಳಲಾಗುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಶಶಾಂಕ ಹಾಗೂ ಹುಲಗಪ್ಪನ ಮಗಳು […]
ಕೀಲಿ ಮುರಿದು ಮನೆಗಳಲ್ಲಿನ ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ ಖದೀಮರು
ಧಾರವಾಡ ಪ್ರಜಾಕಿರಣ.ಕಾಮ್ : ಕೀಲಿ ಮುರಿದು ಮನೆಗಳಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚಿದ ಘಟನೆ ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ರುದ್ರಪ್ಪ ನಾಡಗೌಡ ದೇಸಾಯಿ, ಗಣಪತಿ ಕಿತ್ತೂರ ಎಂಬುವರ ಮನೆಯ ಕೀಲಿ ಮುರಿದು 200 ಗ್ರಾಂ ಅಧಿಕ ಚಿನ್ನದ,25 ತೊಲೆ ಬೆಳ್ಳಿಯ ಆಭರಣ ಮತ್ತು ಲಕ್ಷ ರೂಪಾಯಿಗೂ ಹೆಚ್ಚು ನಗದು ದೋಚಿದ್ದಾರೆ. ಗ್ರಾಮದ ಇನ್ನೂ ಮೂರು ಮನೆಗಳ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಗ್ರಾಮಕ್ಕೆ ಡಿವೈಎಸ್ ಪಿ ನಾಗರಾಜ, ಪಿಎಸ್ ಐ […]