ಅಪರಾಧ

ಧಾರವಾಡದಲ್ಲಿ ಪುಡಿರೌಡಿಗಳ ಹಾವಳಿ; ಏಕಾಏಕಿ ಜಗಳ ಜನರಲ್ಲಿ ಆತಂಕ

*ಧಾರವಾಡದಲ್ಲಿ ಪುಡಿರೌಡಿಗಳ ಹಾವಳಿ; ಏಕಾಏಕಿ ಜಗಳ ಜನರಲ್ಲಿ ಆತಂಕ* ಧಾರವಾಡ ಪ್ರಜಾಕಿರಣ.ಕಾಮ್ : ಪಾರ್ಕಿಂಗ್ ಮಾಡುವಾಗ ಬೈಕ್ ಟಚ್ ಆಗಿ ಬೈಕ್ ಸವಾರ ಹಾಗೂ ಕೆಲ ಯುವಕರು ಪರಸ್ಪರ ಬಡಿದಾಡಿಕೊಂಡ ಘಟನೆ ಧಾರವಾಡ ವಿದ್ಯಾಗಿರಿಯ ಫುಡ್ ಕೋರ್ಟ್ ಪಕ್ಕದಲ್ಲಿ ನಿನ್ನೆ ರಾತ್ರಿ ನಡೆದಿದೆ. ಪುಡಿರೌಡಿಗಳು ಬಡಿದಾಡಿಕೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ವಿದ್ಯಾಗಿರಿ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಪ್ರಕರಣದ ವಿವರ : […]

ಅಪರಾಧ

ಧಾರವಾಡದ ರೌಡಿಶೀಟರ್ ನವೀನ್ ಶಲವಡಿಯಿಂದ ಮಾರಣಾಂತಿಕ ಹಲ್ಲೆ : ಮುಕ್ತಂಸಾಬ ಸಕಲಿ ತಲೆಗೆ ಬೀತ್ತು ಹದಿನೇಳು ಹೊಲಿಗೆ

*ಧಾರವಾಡದಲ್ಲಿ ಮುಂದುವರೆದ ಪುಂಡರ ಅಟ್ಟಹಾಸ* *ಮೊನ್ನೇ ವಿದ್ಯಾಗಿರಿ, ನಿನ್ನೆ ಶಹರ, ಇವತ್ತು ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಗಲಾಟೆ* *ಹೆಬ್ಬಳ್ಳಿ ಅಗಸಿಯ ವಿಜಯಶ್ರೀ ಬೇಕರಿ ಗಾಜು ಪುಡಿ ಪುಡಿ* *ಮಣಿಕಂಠ ನಗರ ನಿವಾಸಿಗಳಿಗೆ ಹದಿನೈದು ಜನರಿಂದ ದಿನನಿತ್ಯ ಉಪಟಳ, ಕಿರಿಕಿರಿ* *ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಮುಂದುವರೆದ ಪುಂಢರ ಉಪಟಳ* *ರೌಡಿಶೀಟರ್ ನವೀನ್ ಶಲವಡಿಯಿಂದ ಮಾರಣಾಂತಿಕ ಹಲ್ಲೆ* *ಮುಕ್ತಂಸಾಬ ಸಕಲಿ ತಲೆಗೆ ಬೀತ್ತು ಹದಿನೇಳು ಹೊಲಿಗೆ* *ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ* *ಧಾರವಾಡ ಹೊಸಬಸ್ ನಿಲ್ದಾಣ […]

ಅಪರಾಧ

ಮಂಗಳೂರು ಯುವಕನ ಮೇಲೆ ಧಾರವಾಡ ಪುಂಡರ ದಾಳಿ

*ಧಾರವಾಡ ರೈಲ್ವೆ ಬ್ರಿಜ್ ಮೇಲೆ ಪಾದಚಾರಿಗಳಿಗೆ ಪುಂಡರ ಕಾಟ* *ಮಂಗಳೂರು ಮೂಲದ ಯುವಕನ ಮೇಲೆ ಧಾರವಾಡ ಪುಂಡರ ದಾಳಿ* *ಬೆಚ್ಚಿಬಿದ್ದ ಯುವಕನ ಪೋಷಕರು ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ* *ಧಾರವಾಡ ರೈಲು ನಿಲ್ದಾಣ ತಲುಪಲು ಪ್ರಯಾಣಿಕರ ನಿತ್ಯ ಪರದಾಟ* *”ಅಭಿಮಾನ”ದಲ್ಲಿ ಕುಡಿದು ದುರಾಭಿಮಾನ ಮೆರೆಯುವುದು ಸರ್ವೆಸಾಮಾನ್ಯ* *112 ಪೊಲೀಸರ ಕಂಡು ಎದ್ದ್ನೊ ಬಿದ್ನೋ ಅಂತ ಓಡಿದ ಪುಂಡರು* *ದಿನನಿತ್ಯ ಕಾಡುವ ಪುಂಡರ ಹಾವಳಿಗೆ ಕಡಿವಾಣ ಹಾಕುವರು ಯಾರು* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ರೈಲ್ವೆ ನಿಲ್ದಾಣ ಬಳಿಯ […]

ಅಪರಾಧ

ಧಾರವಾಡದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು…!

ಧಾರವಾಡ ಪ್ರಜಾಕಿರಣ.ಕಾಮ್  ಮರಕ್ಕೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿ ಸಂಭವಿಸಿದೆ. ನ್ಯಾಯವಾದಿಯೊಬ್ಬರ ಪುತ್ರ ಸಾಯಿರಾಂ (27) ಎಂಬ ಬೈಕ್‌ ಸವಾರನೇ ಈ ಘಟನೆಯಲ್ಲಿ ಸಾವನ್ನಪ್ಪಿದವನು ಎಂದು ಪೊಲೀಸರು ತಿಳಿಸಿದರು. ಬೈಕ್ ತೆಗೆದುಕೊಂಡು ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್‌ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು, ಸಾಯಿರಾಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ. […]

ಅಪರಾಧ

ಧಾರವಾಡದ ಕಲ್ಲೆಯಲ್ಲಿ ಸಿಲಿಂಡರ್ ಸ್ಪೋಟ: ಮಹಿಳೆ ಸಾವು, ನಾಲ್ವರಿಗೆ ಗಾಯ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಕಲ್ಲೆ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಸಂಭವಿಸಿದೆ. ಮಹಾದೇವಿ ಒಗೆಣ್ಣವರ (30) ಎಂಬ ಮಹಿಳೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಉಳಿದಂತೆ ಸುರೇಶ ಒಗೆಣ್ಣವರ, ಶ್ರೀಧರ ಒಗೆಣ್ಣವರ, ಚಿನ್ನಪ್ಪ ಒಗೆಣ್ಣವರ ಹಾಗೂ ಗಂಗವ್ವ ಒಗೆಣ್ಣವರ ಎಂಬುವವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಗ್ಯಾಸ್ ಲಿಕೇಜ್ ಆಗಿತ್ತು. ಏಕಾಏಕಿ ಸ್ಪಾರ್ಕ್ ಆಗಿ ಸಿಲಿಂಡರ್ ಸ್ಪೋಟಗೊಂಡಿದೆ. ಇದರಿಂದ ಮನೆ ತುಂಬ ಬೆಂಕಿ […]

ಅಪರಾಧ

ಅಕ್ರಮ ಮಣ್ಣು ಸಾಗಾಟ ಪ್ರಶ್ನಿಸಿದ್ದಕ್ಕೆ ಹಲ್ಲೆ

ಅಕ್ರಮ ಮಣ್ಣು ಸಾಗಾಟ ಪ್ರಶ್ನಿಸಿದ್ದಕ್ಕೆ ಹಲ್ಲೆ *ನಿಗದಿ ಜಿ.ಪಂ.ಮಾಜಿ ಸದಸ್ಯ ಘಾಟೀನ ಸಹಚರರ ಮೇಲೆ ದೂರು* ಧಾರವಾಡ ಪ್ರಜಾಕಿರಣ.ಕಾಮ್ : ಮುರಕಟ್ಟಿ ಗ್ರಾಮದ ಸರ್ವೆ ನಂ. ೪೨ರ ಬ ಕರಾಬ ಜಮೀನಿನಲ್ಲಿ ಯಾವುದೇ ಪರವಾನಿಗೆ ಇಲ್ಲದ ಯಂತ್ರೋಪಕರಣಗಳನ್ನು ಬಳಸಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ಯುವಕರ ಮೇಲೆ ಜಿ.ಪಂ.ಮಾಜಿ ಸದಸ್ಯ ನಿಂಗಪ್ಪ ಘಾಟೀನ ಹಿಂಬಾಲಕರು ಹಲ್ಲೆ ನಡೆಸಿದ್ದಾರೆಂದು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಡಿಹಾಳ ಗ್ರಾಮದ ಮಹೇಶ ಯಲ್ಲಪ್ಪ ದೊಡಮನಿ ಉರ್ಫ ಮಾದರ ಎಂಬಾತನೆ […]

ಅಪರಾಧ

ಧಾರವಾಡದ ಹೆಬ್ಬಳ್ಳಿಯಲ್ಲಿ ಹಾಡಹಗಲೇ ಮನೆಗಳ್ಳತನ….!?

ಧಾರವಾಡದ ಹೆಬ್ಬಳ್ಳಿಯಲ್ಲಿ ಹಾಡಹಗಲೇ ಮನೆಗಳ್ಳತನ….!? *ಹಿತ್ತಲಬಾಗಿಲಿನಿಂದ ಬಂದು ಕನ್ನ* *ಮನೆಯಲ್ಲಿದ್ದ 11 ತೋಲಿ ಬಂಗಾರ, 25 ಸಾವಿರ ನಗದು ದೋಚಿ ಪರಾರಿ* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಹಾಡಹಗಲೇ ಮನೆಗಳ್ಳತನ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಹೆಬ್ವಳ್ಳಿಯ ಕರಿಯಮ್ಮನ ಕಟ್ಟಿಯ ಹತ್ತಿರದ ಗಿರೀಶ ಮಂಜುನಾಥ ಲಕ್ಷ್ಮೇಶ್ವರ ಎಂಬುವರ‌ ಮನೆಯಲ್ಲಿಯೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಮನೆಯವರು ಟಿ ವಿ ನೋಡುತ್ತಾ ಕುಳಿತಾಗ ಹಿತ್ತಲ ಬಾಗಿಲಿನಿಂದ ಬಂದ […]

ಅಪರಾಧ

2 ಮನೆ ಕಳ್ಳತನ ಪ್ರಕರಣ ಭೇದಿಸಿದ ಧಾರವಾಡ ಪೊಲೀಸರು

*100 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ವಶಪಡಿಸಿಕೊಂಡ ಪೊಲೀಸರು* *4 ಜನ ಮನೆ ಕಳ್ಳರ ಬಂಧಿಸಿದ ಧಾರವಾಡ ಶಹರ ಠಾಣೆ ಪೊಲೀಸರು* ಧಾರವಾಡ ಪ್ರಜಾಕಿರಣ.ಕಾಮ್ : 4 ಜನ ಮನೆ ಕಳ್ಳರನ್ನು ಬಂಧಿಸಿ, ಎರಡು ಪ್ರತ್ಯೇಕ ಪ್ರಕರಣ ಭೇದಿಸುವಲ್ಲಿ ಧಾರವಾಡ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡದ ಮಹಾವೀರ ಕಾಲೋನಿ 5 ನೇ ಕ್ರಾಸ ಸಂಗೋಳ್ಳಿ ಹಾಲ್ ಹತ್ತಿರವಿರುವ ಶ್ರೀಮತಿ ಶೈಲಾ ಕೊಂ ಚಿದಾನಂದ ಕುಂಬಾರ ಅವರ ಮನೆಯಲ್ಲಿ 25.12.2023 ರಂದು ಕಳ್ಳತನವಾಗಿತ್ತು. ಇದರೊಂದಿಗೆ ವಿದ್ಯಾಗಿರಿ […]

ಅಪರಾಧ

ಧಾರವಾಡ : ೨೫ ಲಕ್ಷ ಮೌಲ್ಯದ ಅಕ್ರಮ ಸ್ಪಿರಿಟ್ ಟ್ಯಾಂಕರ ವಶಕ್ಕೆ

ಧಾರವಾಡ ಪ್ರಜಾಕಿರಣ.ಕಾಮ್ : ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ೨೫ ಲಕ್ಷ ಮೌಲ್ಯದ ೨೫ ಸಾವಿರ ಲೀಟರ್ ಅಕ್ರಮ ಸ್ಪಿರಿಟ್ ಟ್ಯಾಂಕರನ್ನು ಅಬಕಾರಿ ಇಲಾಖೆ ದಾಳಿ ನಡೆಸಿ ವಶಕ್ಕೆ‌ ಪಡೆದಿದೆ. ಧಾರವಾಡದಿಂದ‌ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದ ಅಕ್ರಮ ಸ್ಪಿರಿಟ್ ಹೊಂದಿದ್ದ ಟ್ಯಾಂಕರನ್ನು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಸ್ಪಿರಿಟ್ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧಾರದಲ್ಲಿ ಕಲಘಟಗಿ ನಿರೀಕ್ಷಕರು ತಪಾಸಣೆ ನಡೆಸಿದಾಗ ಸತ್ಯ ತಿಳಿದು ಬಂದಿದೆ. ಅಲ್ಲದೇ ಒಂದೇ […]

ಅಪರಾಧ

ಧಾರವಾಡದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಧಾರವಾಡ ಪ್ರಜಾಕಿರಣ.ಕಾಮ್ : ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮದ್ಯದ ಸಮೇತ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಹೊನ್ನಾಪುರ ಗ್ರಾಮದ ಸೋಮಪ್ಪ ಮಿಸಗೇರಿ (27) ಎಂಬ ವ್ಯಕ್ತಿಯೇ ಬಂಧಿತನಾಗಿದ್ದು, ಈತ ಫೆ.29 ರಂದು ಧಾರವಾಡದ ಸಪ್ತಾಪುರದ ಹತ್ತಿರ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಭಾಗದ ಎಸ್.ಟಿ.ಒಡೆಯರ್ ನೇತೃತ್ವದ ಸಿಸಿಬಿ ಇನ್ಸ್‌ಪೆಕ್ಟ‌ರ್ ಪಿ.ಆ‌ರ್.ಗಂಗೇನಹಳ್ಳಿ ಮತ್ತು ಸಿಬ್ಬಂದಿ ದಾಳಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 60 ಸಾವಿರ ರೂಪಾಯಿ […]