ಅಪರಾಧ

ಕುಡಿದ ನಶೆಯಲ್ಲಿ ಹೆಂಡತಿ, ಮಗಳಿಗೆ ಬೆಂಕಿ ಹಚ್ಚಿದ  ಭೂಪ ಸಾವು

ಧಾರವಾಡ prajakiran.com : ಕುಡಿದ ನಶೆಯಲ್ಲಿ ಭೂಪನೊಬ್ಬ ಕಟ್ಟಿಕೊಂಡ ಹೆಂಡತಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದ ಘಟನೆ ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಲಾಕ್ ಡೌನ್ ಹಿನ್ನಲೆಯಿಂದ ಕಳೆದ ಒಂದೂವರೆ ತಿಂಗಳಿಂದ ಮದ್ಯ ಮಾರಾಟ ನಿಷೇಧ ಮಾಡಿದ್ದ ಸರಕಾರ, ಆನಂತರ ನಿಷೇಧ ತೆರವು ಗೊಳಿಸಿತ್ತು.

ಆದರೆ ಮದ್ಯ ಮಾರಾಟ ಮತ್ತೇ ಆರಂಭವಾದ ಬೆನ್ನಲ್ಲೇ ಕುಡಿದ ನಶೆಯಲ್ಲಿ ಕುಡುಕ  ಕಿತಾಪತಿ ಮಾಡಿದ್ದಾನೆ.

ಮನೆಯಲ್ಲಿ ಮಲಗಿದ್ದ ಹೆಂಡತಿ, ಮಗಳಿಗೆ ಬೆಂಕಿ ಹಚ್ಚಿ ತಾನೂ ಕೂಡ ನಶೆಯಲ್ಲಿ ಬೆಂಕಿ ಹಚ್ಚಿಕ್ಕೊಂಡಿದ್ದ. ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಈ ಹೃದಯವಿದ್ರಾವಕ  ಘಟನೆ ನಡೆದಿದೆ.

ಗಾಯಗೊಂಡಿದ್ದ ಮೂವರನ್ನ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೀರಪ್ಪ ಕಟಿಗಾರ (40) ಸಾವನ್ನಪ್ಪಿದ್ದರೆ, ಇಂದು ಪತ್ನಿ ಫಕ್ಕಿರವ್ವಾ (34) ಸಾವನ್ನಪ್ಪಿದ್ದಾಳೆ.

ಇವರಿಬ್ಬರ ಮಗಳಾದ ಯಲ್ಲವ್ವ (12) ಸದ್ಯ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ತಂದೆ ತಾಯಿ ಇಲ್ಲದೆ ಅನಾಥವಾಗಿದ್ದಾಳೆ.  

ಈ ಕುರಿತು ಧಾರವಾಡ ಜಿಲ್ಲೆಯ ನವಲಗುಂದ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *