ಆಸ್ಟಿನ್ ಟೆಕ್ಸಾಸ್ ಉತ್ತರ ಕರ್ನಾಟಕ ಜೋಳದ ರೊಟ್ಟಿ ಭೋಜನಕೂಟ ಹಾಗೂ ಸಂಭ್ರಮ
ಆಸ್ಟಿನ್ ಪ್ರಜಾಕಿರಣ.ಕಾಮ್ : ನಗರದ ಉತ್ಸಾಹಿ ಕನ್ನಡಿಗರಿಂದ ಉತ್ತರ ಕರ್ನಾಟಕದ ಜನಪ್ರಿಯ ಭೋಜನ ಜೋಳದ ರೊಟ್ಟಿ ಹಾಗೂ ಎಣ್ಣೆ ಗಾಯಿ ಪಲ್ಯದ ಪ್ರಸಿದ್ಧ ಭೋಜನಕೂಟ ನಡೆಯಿತು.
ಖಡಕ್ ರೊಟ್ಟಿ, ಗುರೆಳ್ಳು ಚಟ್ನಿ, ಬಳ್ಳೊಳ್ಳಿ ಚಟ್ನಿ, ಶೇಂಗಾ ಹೋಳಿಗೆ, ತುಪ್ಪದ ಮಂಡಿಗೆ ಮುಂತಾದ ರುಚಿಕರ ತಿನಿಸಗಳನ್ನು ಧಾರವಾಡದಿಂದ ವಿಶೇಷವಾಗಿ ಆಮದು ಮಾಡಿ, ಆಸ್ಟಿನ್ ಟೆಕ್ಸಾಸ್ ನಗರದ ಉತ್ಸಾಹಿ ಕನ್ನಡಿಗರಿಗೆ ಬಡಿಸಲಾಯಿತು.
ತಾಯಿನಾಡಿನಿಂದ ೯೦೦೦ ಮೈಲಿ ದೂರ ಇದ್ದರೂ ಕೂಡ ತನ್ನತನವನ್ನು ಮರೆಯದೆ, ಎಲ್ಲ ಕನ್ನಡಿಗರು ರೊಟ್ಟಿ ಭೋಜನಕೂಟದಲ್ಲಿ ತುಂಬು ಹೃದಯದಿಂದ ಭಾಗವಹಿಸಿ ಸಂತೋಷದಿಂದ ನಲಿದರು
ಇದೇ ವೇಳೆ ಮಕ್ಕಳಿಂದ, ಕರ್ನಾಟಕದ ಮಹಾನ್ ನಾಯಕ ಬಸವಣ್ಣನವರ ವಚನಗಳು, ದಾಸರ ಪದಗಳನ್ನು ಹಾಡಲಾಯಿತು.
ಹೊರನಾಡ ಕನ್ನಡಿಗರ ಜೋಳದರೊಟ್ಟಿ ಸಂಭ್ರಮ ಕರ್ನಾಟಕದ ಗತ ವೈಭವವನ್ನು ಮೆರೆಯಲಾಯಿತು
ಆಸ್ಟಿನ್ ನಗರದ ಗಣ್ಯ ವ್ಯಕ್ತಿಗಳಾದ ನಮ್ಮ ಧಾರಾವಾಡದವರೇ ಆದ ರಾಘವೇಂದ್ರ ವೈದ್ಯ (ಒರಾಕಲ್ ಕಂಪನಿ ವೈಸ್ ಪ್ರೆಸಿಡೆಂಟ್), ಖ್ಯಾತ ವೈರಾಣು ತಜ್ಞ ಡಾಕ್ಟರ್ ಮನೋಹರ್ ಮುತ್ನಾಳ್, ಅನೂಪ್ ಅಗ್ನಿಹೋತ್ರಿ, ಅಜೇಯ ಕುಲ್ಕರ್ಣಿ, ವೇಣು ಅಥಣಿಕರ್, ಡಾಕ್ಟರ್ ಮಲ್ಲಿಕಾರ್ಜುನ್ ಗುಗ್ಗರಿ, ಆಸ್ಟಿನ್ ಕನ್ನಡ ಸಂಘದ ಅಧಿಕಾರಿಗಳಾದ ಶೇಖರಪ್ಪ, ಆಂಜನೇಯ ಕಾಮತ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಆಸ್ಟಿನ್ ವರದಿಗಾರ : ಸಮೀರ್ ಚಿಕ್ಕೇರೂರ್