ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರ ಮತ್ತೆ ಹೊಸದಾಗಿ 97 ಕೇಸ್ ಪತ್ತೆಯಾಗಿದ್ದು, ಕರ್ನಾಟಕದ ಸೋಂಕಿತರ ಸಂಖ್ಯೆ 2056 ಕ್ಕೆ ಏರಿದೆ. ಆ ಮೂಲಕ ಕರುನಾಡು 2 ಸಾವಿರದ ಗಡಿ ದಾಟಿದೆ.
ಚಿಕ್ಕಬಳ್ಳಾಪುರದ ಎಲ್ಲಾ 26 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.
ಕರಾವಳಿ ಭಾಗಕ್ಕೂ ಕರೋನಾ ಸೋಂಕು ಕಾಡುತ್ತಲೇ ಇದೆ. ಭಾನುವಾರ ಉಡುಪಿ ಜಿಲ್ಲೆಯಲ್ಲಿ 18 ಪ್ರಕರಣ ಬೆಳಕಿಗೆ ಬಂದಿವೆ.
ಅದೇ ರೀತಿ ಸಕ್ಕರೆ ನಾಡು ಮಂಡ್ಯದಲ್ಲಿ ಭಾನುವಾರ ಮತ್ತೆ 15 ಪ್ರಕರಣಗಳು ಕಂಡುಬಂದರೆ, ಪಕ್ಕದ ಜಿಲ್ಲೆಯ ಹಾಸನದಲ್ಲಿ ಭಾನುವಾರ ಮತ್ತೆ 14 ಸೋಂಕು ದೃಢಪಟ್ಟಿವೆ.
ಕಲ್ಪತರು ನಾಡು ತುಮಕೂರು 2, ಬೆಣ್ಣೆನಗರಿ ದಾವಣಗೆರೆಯಲ್ಲಿ 4, ಬಿಸಲನಾಡು ಕಲಬುರಗಿ ಹಾಗೂ ಯಾದಗಿರಿಯಲ್ಲಿ ಮತ್ತೆ ತಲಾ 6 ಸೋಂಕು ಕಾಣಿಸಿಕೊಂಡಿವೆ.
ಅದೇ ರೀತಿ ಉತ್ತರಕನ್ನಡ, ದಕ್ಷಿಣ ಕನ್ನಡ, ಕೊಡಗು, ವಿಜಯಪುರ ಹಾಗೂ ಧಾರವಾಡದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ.
97 ಜನರ ಪೈಕಿ 73 ಜನರು ಮಹಾರಾಷ್ಟ್ರದಿಂದಲೇ ಬಂದವರೇ ಇದ್ದಾರೆ. 41 ಮಹಿಳೆಯರಿಗೆ ಮಹಾಮಾರಿ ವಕ್ಕರಿಸಿದೆ.
ಚಿಕ್ಕಬಳ್ಳಾಪುರದ 26 ರಲ್ಲಿ 14, ಹಾಸನ, ಉಡುಪಿ ಮಂಡ್ಯದಲ್ಲಿ ಕೂಡ ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದೆ. 15 ವರ್ಷದೊಳಗಿನ ಮಕ್ಕಳು ಕೂಡ ಇರುವುದು ಆತಂಕ ಸೃಷ್ಟಿಸಿದೆ.