ಸಂತ್ರಸ್ತೆ ಕಿಡ್ನಾಪ್ ಕೇಸ್ : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅರೆಸ್ಟ್ ಮಾಡಿದ ಎಸ್ ಐ ಟಿ
ಬೆಂಗಳೂರು ಪ್ರಜಾಕಿರಣ.ಕಾಮ್ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ವಿರುದ್ದ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ಇನ್ನು ವಿದೇಶದಲ್ಲಿ ತಲೆ ಮರೆಸಿಕೊಂಡಿರುವಾಗಲೇ ತಂದೆ ರೇವಣ್ಣ ಅವರನ್ನು ಎಸ್ ಐ ಟಿ ಬಂಧಿಸಿದೆ.
ಈ ಪ್ರಕರಣದಲ್ಲಿ ರೇವಣ್ಣ ಏ ಒನ್ ಇದ್ದು, ಪ್ರಜ್ವಲ್ ಎ ಟೂ ಇದ್ದಾರೆ.
ಆದರೆ, ಸಂತ್ರಸ್ತೆ ಎಸ್ ಐ ಟಿ ಮುಂದೆ ಹಾಜರಾಗಿ ದೂರು ನೀಡಬಾರದು ಎಂದು ಆಕೆಯನ್ನು ಅಪಹರಣ ಮಾಡಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರ ಮಧ್ಯಂತರ ಜಾಮೀನಿನ ಅರ್ಜಿ ವಿಚಾರಣೆ ಬೆನ್ನಲ್ಲೇ ರೇವಣ್ಣ ಅವರನ್ನು ಎಸ್ ಐ ಟಿ ಮಾಜಿ ಪ್ರಧಾನಿ ದೇವೆಗೌಡರ ಮನೆಯಲ್ಲಿ ಇದ್ದ ರೇವಣ್ಣ ಅವರನ್ನು ಬಂಧಿಸಿ ಎಸ್ ಐ ಟಿ ಕಚೇರಿಗೆ ಕರೆ ತಂದಿದೆ.
ರಾತ್ರಿಯಿಡೀ ಅಲ್ಲಿಯೇ ಉಳಿಸುವ ಸಾಧ್ಯತೆ ಇದೆ.
ಈ ನಡುವೆ ಶನಿವಾರ ಎಸ್ ಐ ಟಿ ಅಧಿಕಾರಿಗಳು ಹಾಸನ ಹಾಗೂ ಹೊಳೆನರಸೀಪುರ ಅವರ ಮನೆಗೆ ಇಬ್ಬರು ಸಂತ್ರಸ್ತರಿಗೆ ಕರೆತಂದು ಲೈಂಗಿಕ ದೌರ್ಜನ್ಯ ನಡೆಸಿದ ಸ್ಥಳ ಮಹಜರು ನಡೆಸಿದೆ.
ಮನೆಯಲ್ಲಿ ಇದ್ದ ಭವಾನಿ ರೇವಣ್ಣ ಅವರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆದಿದೆ.
ಅಲ್ಲದೆ, ಸಂಜೆ ವೇಳೆ ಕಿಡ್ನಾಪ್ ಆಗಿದ್ದ ಮಹಿಳೆಯ ರಕ್ಷಣೆ ಮಾಡಿದ ಎಸ್ ಐ ಟಿ ತಂಡ ಅವರಿಂದ ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ.
ಪ್ರಜ್ವಲ್ ರೇವಣ್ಣ ವಿದೇಶದಿಂದ ಬಂದು ಎಸ್ ಐ ಟಿ ಪೊಲೀಸರ ಬಳಿ ಶರಣಾಗಾತ್ತಾರೆಯೇ ಅಥವಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಯಿದೆ.
ಈಗಾಗಲೇ ಎಸ್ ಐ ಟಿ ಸಿಬಿಐ ಮೂಲಕ ವಿದೇಶದಲ್ಲಿ ಚಲನ ವಲನ ಗಳ ಮಾಹಿತಿಯನ್ನು ಕೋರಿದೆ.