ಪತ್ನಿಯನ್ನೇ ಹತ್ಯೆಗೈದ ಪಾಪಿ ಪತಿ
ಧಾರವಾಡ ಪ್ರಜಾಕಿರಣ.ಕಾಮ್ : ಕಟ್ಟಿಕೊಂಡ ಪತ್ನಿಯನ್ನೇ ಪತಿರಾಯನೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನವಲಗುಂದ ತಾಲೂಕಿನ ಆಯಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶಿವಪ್ಪ ಬಳ್ಳೂರ ಎಂಬಾತನೇ ತನ್ನ ಪತ್ನಿ ಮಲ್ಲವ್ವ ಬಳ್ಳೂರ ಎಂಬುವವರನ್ನು ಹತ್ಯೆ ಮಾಡಿದ್ದಾನೆ.
ಶಿವಪ್ಪ ಹಾಗೂ ಮಲ್ಲವ್ವ ಅವರ ವಿವಾಹವಾಗಿ 15 ವರ್ಷವಾಗಿತ್ತು. ಇವರಿಬ್ಬರಿಗೂ ಸೌಭಾಗ್ಯ ಎಂಬ ಹೆಣ್ಣು ಮಗಳು ಸಹ ಇದ್ದಾಳೆ. ಹೀಗಿದ್ದರೂ ಶಿವಪ್ಪ ತನ್ನ ಪತ್ನಿಯ ಮೇಲೆ ಸಂದೇಹ ಪಡುತ್ತಿದ್ದ.
ನಿನ್ನೆ ರಾತ್ರಿ ಕುಡಿದು ಬಂದು ತನ್ನ ಪತ್ನಿಯೊಂದಿಗೆ ಜಗಳ ತೆಗೆದ ಶಿವಪ್ಪ, ರಾತ್ರಿಯಿಡೀ ಆಕೆಯೊಂದಿಗೆ ಜಗಳ ಮಾಡಿದ್ದಾನೆ.
ಕೊನೆಗೆ ಈ ಜಗಳ ಮಲ್ಲವ್ವಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡಲಿಯಿಂದ ತನ್ನ ಪತ್ನಿಯನ್ನು ಶಿವಪ್ಪ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿಯನ್ನು ನವಲಗುಂದ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇತ್ತ ತನ್ನ ತಾಯಿಯನ್ನು ಕಳೆದುಕೊಂಡ ಸೌಭಾಗ್ಯ ಗೋಳಾಡುತ್ತಿದ್ದ ದೃಶ್ಯ ನೋಡುಗರ ಮನಮಿಡಿಯಿತು.