ಅಪರಾಧ

ಮಗಳನ್ನು ಪೀಡಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ಅಪ್ಪ ಜೈಲು ಪಾಲು

ಧಾರವಾಡ ಪ್ರಜಾಕಿರಣ.ಕಾಮ್ : ಮಗಳನ್ನು ಪೀಡಿಸುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದ ಅಪ್ಪ ಇದೀಗ ಜೈಲು ಪಾಲಾಗಿದ್ದಾನೆ.

ತಂದೆಗೆ ಮಕ್ಕಳು ಅಂದ್ರೆ ಸಾಕು ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಹೆಣ್ಣು ಮಕ್ಕಳು ಅಂದ್ರೆ ಪಂಚಪ್ರಾಣ.

ಹೀಗಾಗಿ ಪಂಚಪ್ರಾಣವಾಗಿದ್ದ ಮಗಳ ಲೈಫ್ ಜೀವನದಲ್ಲಿ ಚೆಲ್ಲಾಟ ಆಡಲು ಹೋದವನ ಜೀವ ತೆಗೆಯಲು ಹೋದ ತಂದೆ ಹುಲಗಪ್ಪ‌ ಬಡಿಗೇರ
ಜೈಲು ಸೇರಿದ್ದಾನೆ.

ಧಾರವಾಡದ ಸೈದಾಪುರ ನಿವಾಸಿ ಶಶಾಂಕ‌‌ ಹಲ್ಲೆಗೊಳಗಾದ ಯುವಕ. ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ

ಈತ ತನ್ನದೇ ಏರಿಯಾದಲ್ಲಿದ್ದ ಹುಡುಗಿ ಜೊತೆ ಕಳೆದ ಒಂದೂವರೆ ವರ್ಷದಿಂದ ಪ್ರೀತಿ ಶುರುವಿಟ್ಟಿದ್ದನು.

ಬಳಿಕ ಈ ವಿಷಯ ತಿಳಿದ ಹುಡುಗಿಯ ತಂದೆ ಹುಲಗಪ್ಪ ತನ್ನ ಮಗಳಿಗೆ ಬುದ್ದಿವಾದ ಹೇಳಿದ್ದಾನೆ.

ಆದರೆ ಮಗಳು ಕೇಳಿರಲಿಲ್ಲ. ಹೀಗಾಗಿ ಶಶಾಂಕನಿಗೂ ಕೂಡಾ ಒಂದೆರಡು ಬಾರಿ ಬುದ್ದಿ ಮಾತು ಹೇಳಿದ್ದನು.

ಇತ್ತ ಪ್ರೀತಿಗೆ ಸಿಲುಕಿದ್ದ ಶಶಾಂಕನಿಗೆ ಹುಡುಗಿಯ ತಂದೆ ಹುಲಗಪ್ಪನ ಮಾತು ತಲೆಗೆ ಹಚ್ಚಿಕೊಂಡಿಲ್ಲ ಬದಲಿಗೆ ನಿನ್ನ ಕೈಯಲ್ಲಿ ಏನು ಆಗತ್ತೆ ಅದನ್ನು ಮಾಡಿಕೊ ಎಂದಿದ್ದಾನೆ.

ಇದರಿಂದ ರೊಚ್ಚಿಗೆದ್ದ ಹುಲಗಪ್ಪನು ಶಶಾಂಕನ ಹೊಟ್ಟೆಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಶಾಂಕನನ್ನು ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಶಾಂಕ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತ‌ ತನ್ನ ಮಗಳ ಜೀವನ ಹಾಳಾಗಬಾರದು ಎಂಬ ಉದ್ದೇಶದಿಂದ, ಯುವಕನ ಕೊಲೆಗೆ ಯತ್ನಿಸಿದ ಅಪ್ಪ ಜೈಲು ಪಾಲಾಗಿದ್ದಾನೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *