ಅಪರಾಧ

ವಿಜಯಪುರ : ಪತ್ನಿಯನ್ನು ಕೊಲೆಗೈದು ಶವ ಹೂತಿಟ್ಟ ಪಾಪಿ ಪತಿ

ವಿಜಯಪುರ prajakiran.com :
ತನ್ನ ಮಕ್ಕಳನ್ನು ದೂರು ಮಾಡಿದ್ದಾಳೆ ಎಂದು ಕುಪಿತಗೊಂಡ ಪಾಪಿ ಪತ್ನಿಯನ್ನು ಪತಿಯೊಬ್ಬ ಆಕೆಯನ್ನು ಕೊಲೆಗೈದು ಶವವನ್ನು ಜಮೀನಿನಲ್ಲಿ ಹೂತಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.

ದಾಕ್ಷಾಯಣಿ ರಾಚಯ್ಯ ಬನ್ನಿಗೋಳಮಠ (36) ಎಂಬುವರೆ ಹತ್ಯೆಯಾಗಿರುವ ನತದೃಷ್ಟೆ ಪತ್ನಿಯಾಗಿದ್ದಾಳೆ‌.

ರಾಚಯ್ಯ ಬನ್ನಿಗೋಳಮಠ ಎಂಬಾತನೇ ಪತ್ನಿಯನ್ನು ಹತ್ಯೆಗೈದಿರುವ ಪಾಪಿ ಪತಿಯಾಗಿದ್ದಾನೆ.

ಮಕ್ಕಳನ್ನು ತನ್ನಿಂದ ದೂರ ಮಾಡಿದ್ದಾಳೆ ಎಂಬ ಆಕ್ರೋಶದಲ್ಲಿ ಕೊಲೆಗೈದು ಜಮೀನಿನಲ್ಲಿ ಶವವನ್ನು ಹೂತಿಟ್ಟಿದ್ದ ಎಂದು ಗೊತ್ತಾಗಿದೆ.

ಮಾಹಿತಿಯನ್ನು ತಿಳಿಯುತ್ತಿದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಹೂತಿಟ್ಟ ಶವ ಪತ್ತೆಯಾಗಿದೆ‌.

ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *