ವಿಜಯಪುರ prajakiran.com :
ತನ್ನ ಮಕ್ಕಳನ್ನು ದೂರು ಮಾಡಿದ್ದಾಳೆ ಎಂದು ಕುಪಿತಗೊಂಡ ಪಾಪಿ ಪತ್ನಿಯನ್ನು ಪತಿಯೊಬ್ಬ ಆಕೆಯನ್ನು ಕೊಲೆಗೈದು ಶವವನ್ನು ಜಮೀನಿನಲ್ಲಿ ಹೂತಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ.
ದಾಕ್ಷಾಯಣಿ ರಾಚಯ್ಯ ಬನ್ನಿಗೋಳಮಠ (36) ಎಂಬುವರೆ ಹತ್ಯೆಯಾಗಿರುವ ನತದೃಷ್ಟೆ ಪತ್ನಿಯಾಗಿದ್ದಾಳೆ.
ರಾಚಯ್ಯ ಬನ್ನಿಗೋಳಮಠ ಎಂಬಾತನೇ ಪತ್ನಿಯನ್ನು ಹತ್ಯೆಗೈದಿರುವ ಪಾಪಿ ಪತಿಯಾಗಿದ್ದಾನೆ.
ಮಕ್ಕಳನ್ನು ತನ್ನಿಂದ ದೂರ ಮಾಡಿದ್ದಾಳೆ ಎಂಬ ಆಕ್ರೋಶದಲ್ಲಿ ಕೊಲೆಗೈದು ಜಮೀನಿನಲ್ಲಿ ಶವವನ್ನು ಹೂತಿಟ್ಟಿದ್ದ ಎಂದು ಗೊತ್ತಾಗಿದೆ.
ಮಾಹಿತಿಯನ್ನು ತಿಳಿಯುತ್ತಿದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜಮೀನಿನಲ್ಲಿ ಹೂತಿಟ್ಟ ಶವ ಪತ್ತೆಯಾಗಿದೆ.
ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.