ಧಾರವಾಡ : ಗ್ರಾಮ ಪಂಚಾಯತಿ ಕಚೇರಿ ಕೀಲಿ ಮುರಿದು ಸುಮಾರು 2.60 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ ಘಟನೆ ಅಳ್ನಾವರ ತಾಲ್ಲೂಕಿನ ಪ್ರಭುನಗರ- ಹೊನ್ನಾಪೂರ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ಗ್ರಾಮ ಪಂಚಾಯತಿ ಕಚೇರಿ ಕೀಲಿ ಮುರಿದು ಒಳನುಗ್ಗಿದ ಕಳ್ಳರು, 2 ಕಂಪ್ಯೂಟರ್, 1 ಲ್ಯಾಪಟಾಪ್, 1 ಸೋಲಾರ್ ಬ್ಯಾಟರಿ, ಸಿಸಿಟಿವಿ ಕ್ಯಾಮೆರಾ, ಡಿವಿಆರ್ ಗಳನ್ನು ದೋಚಿದ್ದಾರೆ.
ಸ್ಥಳಕ್ಕೆ ಸಿಪಿಐ ಎಸ್.ಸಿ. ಪಾಟೀಲ ಮತ್ತು ಪಿಎಸ್ ಐ ಪ್ರವೀಣ ನೇಸರಗಿ ಭೇಟಿ ನೀಡಿದ್ದರು.
ಈ ಕುರಿತು ಅಳ್ನಾವರ ಠಾಣೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೂರು ನೀಡಿದ್ದು, ತನಿಖೆ ಮುಂದುವರೆದಿದೆ.