ಧಾರವಾಡ prajakiran.com : 15 ರ ಯುವತಿಯ ಹೃದಯವನ್ನು ಧಾರವಾಡದ ಎಸ್ ಡಿ ಎಂ ಹಾಸ್ಪಿಟಲ್ ನಿಂದ ಬೆಳಗಾವಿಯ ಕೆ.ಎಲ್ ಇ ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ಮೂಲಕ ತೆಗೆದುಕೊಂಡು ಹೋಗಿ ಯುವಕನಿಗೆ ಹೃದಯ ಕಸಿ ಮಾಡಿದ ಬೆನ್ನಲ್ಲೇ ಈಗ ಮತ್ತೊಂದು ಅಂಗಾಗ ಬೆಳಗಾವಿಗೆ ಹೋಗಿದೆ.
ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಿಂದ ಕಿಡ್ನಿಯನ್ನು ಅಂಬ್ಯುಲೆನ್ಸ್ ಮೂಲಕ ಝಿರೋ ಟ್ರಾಫಿಕ್ ಮೂಲಕ ಬೆಳಗಾವಿಗೆ ತೆಗೆದುಕೊಂಡು ಹೋಗಲಾಯಿತು.
ಈ ಅಂಬ್ಯುಲೆನ್ಸ್ ಧಾರವಾಡದ ಮೂಲಕ ಬೆಳಗಾವಿಗೆ ಝಿರೋ ಟ್ರಾಫಿಕ್ ನಲ್ಲಿ ತಲುಪಿತು
ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಖುದ್ದಾಗಿ ನಿಂತು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ಇತ್ತ ಕೆ.ಎಲ್ ಇ ಆಸ್ಪತ್ರೆಯಲ್ಲಿ ಧಾರವಾಡದಿಂದ ಬರುತ್ತಿರುವ
ಕಿಡ್ನಿಯನ್ನು ಮತ್ತೊಬ್ಬನಿಗೆ ಜೋಡಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.