ಅಪರಾಧ

ಧಾರವಾಡದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಪ್ರೇಯಸಿ ಮೇಲೆಯೇ ಜಳಪಿಸಿದ ತಲ್ವಾರ್ : ರಾಮ್ ಸೇನಾ ಜಿಲ್ಲಾಧ್ಯಕ್ಷ ವಿಜಯ ಕದಂನಿಂದ ದುಷ್ಕೃತ್ಯ

ಧಾರವಾಡ prajakiran. com : ಧಾರವಾಡದ ಸೋನಾಪುರದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಪ್ರೇಯಸಿ ಮೇಲೆಯೇ ಭೂಪನೊಬ್ಬ ತಲ್ವಾರ್ ಜಳಪಿಸಿದ ಘಟನೆ ಬುಧವಾರ ನಡೆದಿದೆ.

ರಾಮ್ ಸೇನಾ ಕರ್ನಾಟಕ ದ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಕದಂನಿಂದ ಈ ದುಷ್ಕೃತ್ಯ ನಡೆದಿದ್ದು, ತಲ್ವಾರ್ ನಿಂದ ದಾಳಿ ಮಾಡಿದ ಬಳಿಕ ಆತನೇ ಉಪನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ವಿಜಯ ಕದಂ ಹಾಗೂ ಪದ್ಮಾ ನಡುವೆ ಹಲವು ವರ್ಷದ ಸಂಬಂಧವಿದ್ದು, ಮಾತಿಗೆ ಮಾತು ಬೆಳೆದು ಪರಸ್ಪರ ಸಂಬಂಧ ಹದಗೆಟ್ಟಿದೆ.

ಇದರಿಂದ ರೊಚ್ಚಿಗೆದ್ದ ವಿಜಯ ಕದಂ ಹಾಡಹಗಲೇ ಆಕೆಯ ಮನೆಗೆ ತಲ್ವಾರ್ ತೆಗೆದುಕೊಂಡು ನುಗ್ಗಿದ್ದಾನೆ.

ಆಕೆ ಆತ್ಮರಕ್ಷಣೆಗಾಗಿ ಚಾಕು ಹಿಡಿದುಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.

ಧಾರವಾಡದ ಉಪನಗರ ಠಾಣೆ ಪೊಲೀಸರು ಆರೋಪಿ ವಿಜಯ ಕದಂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *