ಧಾರವಾಡ prajakiran. com : ಧಾರವಾಡದ ಸೋನಾಪುರದಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಪ್ರೇಯಸಿ ಮೇಲೆಯೇ ಭೂಪನೊಬ್ಬ ತಲ್ವಾರ್ ಜಳಪಿಸಿದ ಘಟನೆ ಬುಧವಾರ ನಡೆದಿದೆ.
ರಾಮ್ ಸೇನಾ ಕರ್ನಾಟಕ ದ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಕದಂನಿಂದ ಈ ದುಷ್ಕೃತ್ಯ ನಡೆದಿದ್ದು, ತಲ್ವಾರ್ ನಿಂದ ದಾಳಿ ಮಾಡಿದ ಬಳಿಕ ಆತನೇ ಉಪನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ವಿಜಯ ಕದಂ ಹಾಗೂ ಪದ್ಮಾ ನಡುವೆ ಹಲವು ವರ್ಷದ ಸಂಬಂಧವಿದ್ದು, ಮಾತಿಗೆ ಮಾತು ಬೆಳೆದು ಪರಸ್ಪರ ಸಂಬಂಧ ಹದಗೆಟ್ಟಿದೆ.
ಇದರಿಂದ ರೊಚ್ಚಿಗೆದ್ದ ವಿಜಯ ಕದಂ ಹಾಡಹಗಲೇ ಆಕೆಯ ಮನೆಗೆ ತಲ್ವಾರ್ ತೆಗೆದುಕೊಂಡು ನುಗ್ಗಿದ್ದಾನೆ.
ಆಕೆ ಆತ್ಮರಕ್ಷಣೆಗಾಗಿ ಚಾಕು ಹಿಡಿದುಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಧಾರವಾಡದ ಉಪನಗರ ಠಾಣೆ ಪೊಲೀಸರು ಆರೋಪಿ ವಿಜಯ ಕದಂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.