ಧಾರವಾಡ prajakiran.com : ಧಾರವಾಡದ ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ಶ್ರೀಗಂಧದ ಸಾಗಾಟದ ಜಾಲ ಪತ್ತೆಯಾಗಿದೆ.
ಧಾರವಾಡದಿಂದ ಆಂಧ್ರಕ್ಕೆ ಸಾಗಿಸುತ್ತಿದ್ದ ಶ್ರೀಗಂಧವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದಾರೆ.
ಸುಮಾರು 25 ಲಕ್ಷ ಮೌಲ್ಯದ 250 ಕೆಜಿ ಶ್ರೀಗಂಧ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ನಾಲ್ವರ ಬಂಧನ ಮಾಡಲಾಗಿದ್ದು,, ಮೂವರು ಪರಾರಿಯಾಗಿದ್ದಾರೆ.
ಅಲ್ಲದೆ, ಸಾಗಾಟಕ್ಕೆ ಬಳಿಸಿದ್ದ ಒಂದು ಕಾರ್ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.
ಆಂಧ್ರದಲ್ಲಿ ಇರುವ ಸುಗಂಧ ದ್ರವ್ಯ ಕಾರ್ಖಾನೆಗಳಲ್ಲಿ
ದ್ರವ್ಯ ತಯಾರಿಸಿ ದುಬೈಗೆ ಸಾಗಿಸುತ್ತಿದ್ದ ಜಾಲ ಇದಾಗಿದೆ.
ಕಾರ್ಖಾನೆಗೆ ಕಳ್ಳತನದ ಶ್ರೀಗಂಧ ಪೂರೈಕೆ ಮಾಡುತ್ಯಿದ್ದ ಚಿಕ್ಕಮಗಳೂರಿನ ಗುರುಮೂರ್ತಿ, ಗದಗ್ನ ಮುದುಕಪ್ಪ ಪೂಜೇರಿ, ಹಿರಿಯಪ್ಪ ಹಿರೇಮನಿ ಹಾಗೂ ಹಾವೇರಿಯ ಭೀಮಪ್ಪ ಸುಣಗಾರ ಬಂಧಿತ ಆರೋಪಿತರು ಎಂದು ಅರಣ್ಯ ಇಲಾಖೆ ತಿಳಿಸಿದೆ.