ಅಂತಾರಾಷ್ಟ್ರೀಯ

ನನ್ನ ಪೋನ್ ಟ್ಯಾಪ್ ಆಗಿದೆ ಎಂದ ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ

ನನ್ನ ಪೋನ್ ಟ್ಯಾಪ್ ಆಗಿದೆ, ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ದೂರು 

ಬೆಂಗಳೂರು prajakiran.com :
ನನ್ನ ಪೋನ್ ಟ್ಯಾಪ್ ಆಗಿದೆ, ನಾನು
ಎಲ್ಲಿಯೋ ಹೋದರೂ ಅಲ್ಲಿ ನನಗಿಂತ ಮುಂಚಿತವಾಗಿಯೇ ಒಂದಿಷ್ಟು ಜನ ಬರತ್ತಾರೆ.

ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ಧಾರವಾಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಗಂಭೀರವಾದ ಆರೋಪ ಮಾಡಿದ್ದಾರೆ.

ಅವರು ಈ ಕುರಿತು ವಿಧಾನ ಸಭಾ ಸ್ಪೀಕರ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾ ನಿರ್ದೇಶಕರಿಗೆ ಜೂನ್ 14ರಂದೆ ಪತ್ರ ಬರೆದಿದ್ದೇನೆ.

ಈ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿದರೆ, ಇದರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಅಲ್ಲದೆ, ನನಗೆ ಪರಿಚಿತನಲ್ಲದ ಯುವರಾಜ ಸ್ವಾಮಿ ಎಂಬಾತ ಕರೆ ಮಾಡಿ ನನಗೆ ಜೈಲಿಗೆ ಹಾಕಿದ್ದಾರೆ ಎಂದು ಹೇಳುತ್ರಿದ್ದಾನೆ.

ನಾನು ಆತ ಯಾರೆಂದು ನೋಡಿಯೇ ಇಲ್ಲ. ಆತ ನನಗೆ ಈ ಸಂದರ್ಭದಲ್ಲಿ ಯಾಕೆ ಕರೆ ಮಾಡಬೇಕು. ಇದರಲ್ಲಿ ಪಿತೂರಿ ಇದೆ.

ನನಗೆ ಸಿಲುಕಿಸುವ ಪಿತೂರಿ ನಡೆಯುತ್ತಿದೆ ಎಂದು ಸಂದೇಹ ವ್ಯಕ್ತಪಡಿಸಿದರು

ಆತನ ಬಗ್ಗೆ ನಾನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ ಎಂದು ಅರವಿಂದ ಬೆಲ್ಲದ ದೂರಿದರು.

ಆದರೆ ರಾಜ್ಯದಲ್ಲಿ ಅವರದೆ ಆದ
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಅದರ ವಿರುದ್ದವೇ ದೂರಿದ್ದಾರೆ.

ಸಿಎಂ ಹುದ್ದೆಯ ರೇಸ್ ನಲ್ಲಿ ಹೆಸರು ಪ್ರಸ್ತಾಪವಾದ ಬೆನ್ನ ಹಿಂದೆಯೇ ಅರವಿಂದ ಬೆಲ್ಲದ ವಿರುದ್ಧ ಈ ಬೆಳವಣಿಗೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *