ಬೆಂಗಳೂರು prajakiran.com : ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಕಾಮಗಾರಿಗೆ ಟೆಂಡರ್ ಕರೆಯಲು ಸಿಎಂ ಪುತ್ರ ವಿಜೇಂದ್ರ ಸಜ್ಜು ಆಗಿದ್ದಾರೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ ಗಂಭೀರ ಆರೋಪ ಮಾಡಿದ್ದಾರೆ.
ಸಚಿವರು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಣಕಾಸು ಇಲಾಖೆಯ ಪರವಾನಿಗೆ ಕೂಡ ಪಡೆಯದೆ ಇರುವುದು ನೋಡಿದರೆ ವಿಜೇಂದ್ರ ಯಾರು ಎಂಬುದು ಅರ್ಥವಾಗುತ್ತಿಲ್ಲ ಎಂದು ಗುಡುಗಿದರು.
ಬಿಜೆಪಿಯಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ. ಇಲ್ಲೂ ಕುಟುಂಬ ರಾಜಕಾರಣವಿದೆ ಎಂದು ವಿಜೇಂದ್ರ ವಿರುದ್ದ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಪುತ್ರ ವಿಜೇಂದ್ರ ಎಲ್ಲಾ ಇಲಾಖೆಯ ಕೆಲಸ ಕಾರ್ಯದಲ್ಲಿ ಕೈ ಆಡಿಸುತ್ತಿದ್ದಾರೆ.
ಹೀಗಾಗಿ ಯಡಿಯೂರಪ್ಪ ಅವರನ್ನು ಕೈ ಬಿಟ್ಟ ಮೇಲೆ ನಿರಾಣಿ, ಯತ್ನಾಳ ಇಲ್ಲವೇ ಬೆಲ್ಲದ ರನ್ನು ಮುಖ್ಯಮಂತ್ರಿ ಮಾಡಲಿ ಎಂದು ಹೆಚ್ ವಿಶ್ವನಾಥ ಸಲಹೆ ನೀಡಿದರು.