ಚಾಮರಾಜನಗರ prajakiran.com : ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ದಿಂದ ದೂರ ಸರಿಯಲು ತಿರ್ಮಾನ ಮಾಡಿದ್ದೇನೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ.
ನಾನು ಕಾಂಗ್ರೇಸ್ ಪಕ್ಷಕ್ಕೆ ಪಾಠ ಕಲಿಸಲು ಈ ಭಾರಿ ಸ್ಪರ್ಧೆ ಮಾಡಬೇಕಾಯಿತು. ಇಷ್ಟೇಲ್ಲ ಅದರೂ ಅವರು ಪಾಠ ಕಲಿತಿಲ್ಲ ಎಂದು ಕುಟುಕಿದರು.
ನನಗೆ ಆರೋಗ್ಯದಲ್ಲಿ ಕಷ್ಟವಾಗುತ್ತಿದೆ. ಅದರಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ನಾನು ಮತ್ತು ರಾಮವಿಲಾಸ್ ಪಾಸ್ವನ್ ಇಬ್ಬರು ಜೊತೆಗೆ ರಾಜಕಿಯಕ್ಕೆ ಬಂದೆವು ಅವರು ಇಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದು ನಮ್ಮ ಪಕ್ಷದ ವರಿಷ್ಠರು ಯಾವ ತಿರ್ಮಾನ ತೆಗೆದು ಕೊಳ್ಳುತಾರೊ ಅದಕ್ಕೆ ಬದ್ದನಾಗಿರುತ್ತೇನೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.