ಚಿಕ್ಕೋಡಿ prajakiran.com : ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಆರೋಪಿಯೊಬ್ಬ ಸ್ಟೇಷನ್ ನಿಂದಲೇ ಪರಾರಿಯಾದ ಘಟನೆ ಚಿಕ್ಕೋಡಿ ಯಲ್ಲಿ ನಡೆದಿದೆ.
ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಈತನನ್ನು ,
ನಿನ್ನೆ ಮಧ್ಯರಾತ್ರಿಯಷ್ಟೆ ಕೊಪ್ಪಳದ ಸಬ್ ಜೈಲಿಂದ ಚಿಕ್ಕೋಡಿಗೆ ಕರೆತಂದಿದ್ದರು.
ವಿವಿಧ ಪ್ರಕರಣಗಳ ವಿಚಾರಣೆಗಾಗಿ ಆರೋಪಿ ಜಶ್ವಂತ್ ಸಿಂಗ್ ನನ್ನ ಕರೆತರಲಾಗಿತ್ತು.
ಇಂದು ಕೋರ್ಟಗೆ ಹಾಜರುಪಡಿಸಿ ವಶಕ್ಕೆ ಪಡೆಯಬೇಕಿತ್ತು.
ಆದರೆ, ಚಾಲಾಕಿ ಆರೋಪಿ ಜಶ್ವಂತ್ ಸಿಂಗ್ ಬೆಳಗಿನ ಜಾವ ಸ್ಟೇಶನ್ ನಿಂದಲೇ ಪರಾರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದ್ದಾನೆ.
ಮಧ್ಯಪ್ರದೇಶ ಮೂಲದ ಆರೋಪಿ ಜಶ್ವಂತಸಿಂಗ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಹೀಗಾಗಿ
ಪರಾರಿಯಾಗಿದ್ದ ಚಾಲಾಕಿಗಾಗಿ ಚಿಕ್ಕೋಡಿ ಪೊಲೀಸರಿಂದ ಹುಟುಕಾಟ ಮುಂದುವರೆಸಿದ್ದಾರೆ.