ಧಾರವಾಡ prajakiran.com : ಹೊಲದ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಪ್ರಕರಣ ಧಾರವಾಡ ದಲ್ಲಿ ನಡೆದಿದೆ.
ತಾಲೂಕಿನ ನಾಯಕನ ಹೂಲಿಕಟ್ಟಿ ಕ್ರಾಸ್ ಬಳಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಯರಿಕೊಪ್ಪ ಗ್ರಾಮದ ಗದಿಗೆಪ್ಪ ದೊಡ್ಡಪ್ಪ ಹುಲಿಯಪ್ಪನವರ ಎಂಬುವರ ಬೈಕ್ (ಕೆಎ-೨೫,ಇಆರ್-೩೫೭೪) ಕಳ್ಳತನವಾಗಿದೆ.
ಅವರು ಕಳೆದ ದಿ.೨೧ ರಂದು ನಾಯಕನ ಹೂಲಿಕಟ್ಟಿ ಕ್ರಾಸ್ ಬಳಿಯಿರುವ ತಮ್ಮ ಹೊಲದ ಸಮೀಪ ನಿಲ್ಲಿಸಿದಾಗ ಕಳ್ಳತನ ಮಾಡಲಾಗಿದೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.