ಧಾರವಾಡ prajakiran.com : ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿ ಶೀಟರ್ಗಳು ಪರಸ್ಪರ ಕಿತ್ತಾಡಿಕೊಂಡ ಘಟನೆ ಧಾರವಾಡದ ಶಿವಾನಂದ ನಗರದಲ್ಲಿ ಇತ್ತೀಚೆಗೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಸೋಮವಾರ ರೌಡಿ ಶೀಟರ್ಗಳಾದ ಮಕ್ತುಂ ಸೊಗಲದ ಮತ್ತು ಫ್ರುಟ್ ಇರ್ಫಾನ್ ಪುತ್ರ ಅರ್ಬಾಜ್ ಇರ್ಫಾನ್ ಮಧ್ಯೆ ಈ ಕಿತ್ತಾಟ ನಡೆದಿದೆ.
ಧಾರವಾಡದ ಶಿವಾನಂದ ನಗರದಲ್ಲಿನ ಮನೆಯ ಮಾಲಿಕತ್ವದ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಗಲಾಟೆ ನಡೆದಿದೆ.
ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿದ ಪರಿಣಾಮ ಕಿತ್ತಾಟ ನಡೆದಿದೆ.
ಬಳಿಕ ಇಬ್ಬರೂ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ತೆರಳಿ ದೂರು ಮತ್ತು ಪ್ರತಿದೂರು ದಾಖಲಿಸಿದ್ದಾರೆ.
ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಕೊಲೆಯಾದ ಧಾರವಾಡದ ಫ್ರುಟ್ ಇರ್ಫಾನ್ ಮಗನೇ ಈ ಅರ್ಬಾಜ್.
ರೌಡಿ ಶೀಟರ್ ಮಕ್ತುಂ ಸೊಗಲದ ಕೂಡ ಈ ಹಿಂದೆ ಫ್ರುಟ್ ಇರ್ಫಾನ್ನ ಖಾಸಾ ಶಿಷ್ಯನಾಗಿದ್ದ.
ಫ್ರುಟ್ ಇರ್ಫಾನ್ ಕೊಲೆಯಾದ ಬಳಿಕ ಆತನ ಮಗ ಅರ್ಬಾಜ್ ತಂದೆಯ ರಿಯಲ್ ಎಸ್ಟೇಟ್ ವ್ಯವಹಾರ, ಆಸ್ತಿಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ.
ಇದರಿಂದಾಗಿ ಕಂಗಲಾದ ಮಕ್ತುಂ ಸೊಗಲದ ಕೂಡ ಎಂದಿನಂತೆ ತನ್ನ ಆಸ್ತಿ ಹೇಗಾದರೂ ಮಾಡಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾನೆ.
ಇದೀಗ ಶಿವಾನಂದ ನಗರದಲ್ಲಿನ ಮನೆಯೊಂದರ ಮಾಲಿಕತ್ವಕ್ಕೆ ಸಂಬಂಧಿಸಿ ಇವರಿಬ್ಬರೂ ಕಿತ್ತಾಡಿಕೊಂಡು ಠಾಣೆಯ ಮೆಟ್ಟಿಲೇರಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಹದ್ದುಬಸ್ತಿನಲ್ಲಿಎಉತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕು.