*ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ರೇಪ್ ಕೇಸ್*
*ಎರಡನೇ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಎಸ್ ಐ ಟಿ*
*ಜರ್ಮನ್ ನಿಂದ ದುಬೈಗೆ ಶಿಫ್ಟ್ ಆದ ಪ್ರಜ್ವಲ್*
ಬೆಂಗಳೂರು ಪ್ರಜಾಕಿರಣ.ಕಾಮ್ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಮಹಿಳೆ ಸಮಾಜ ಸೇವಕಿಯಾಗಿದ್ದು, ಜನರ ಕೆಲಸದ ನಿಮಿತ್ತ ಪ್ರಜ್ವಲ್ ಭೇಟಿಯಾದಾಗ ಅವರು ಬಲವಂತದಿಂದ ರೂಮ್ ಒಳಗೆ ಕರೆದುಕೊಂಡು ಹೋಗಿ ಗನ್ ತೋರಿಸಿ ಲೈಂಗಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ.
ಅಲ್ಲದೆ, ವಿಡಿಯೊ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಐಪಿಸಿ ಸೆ. 376, 506, ಅಡಿ ದೂರು ದಾಖಲು ಮಾಡಿದ್ದಾರೆ.
ಇದೇ ವೇಳೆ ಮೈಸೂರಿನಲ್ಲಿ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿದೆ.
ಹೊಳೆನರಸೀಪುರ ಶಾಸಕ ಹೆಚ್. ಡಿ.
ರೇವಣ್ಣ ಹಾಗೂ ಅವರ ಸಂಬಂಧಿ ಸತೀಸ್ ಬಾಬು ವಿರುದ್ಧ ಸಂತ್ರಸ್ತ್ರೆಯನ್ನು ಕಿಡ್ನಾಪ್ ಮಾಡಿ ಸಂತ್ರಸ್ತ್ರ ಮಹಿಳೆಯ ಪ್ರಕರಣ ಮುಚ್ಚಿ ಹಾಕಲು ತಮ್ಮ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ಸತೀಶ್ ಬಾಬುನನ್ನು ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸಂತ್ರಸ್ತೆ ಪತ್ತೆ ಹಚ್ಚಲು ಸಿಎಂ ಸೂಚಿಸಿದ್ದಾರೆ. ಮಹಿಳೆಯನ್ನೇ ಕಿಡ್ನಾಪ್ ಮಾಡಿದ್ದ ಹಿನ್ನೆಲೆಯಲ್ಲಿ ಹೆಚ್.ಡಿ ರೇವಣ್ಣಗೆ ಬಂಧನ ಭೀತಿ ಎದುರಾಗಿದ್ದು, ಮಧ್ಯಂತರ ಜಾಮೀನಿನ ವಿಚಾರಣೆ ನಾಳೆ ನಡೆಯಲಿದೆ.
ಈ ಮಧ್ಯೆ ಹೆಚ್.ಡಿ.
ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಗೆ ವಿಚಾರಣೆಗೆ ಹಾಜರಾಗಲು ಎಸ್ ಐ ಟಿ ಎರಡನೇ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
ಮೊದಲ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ವಿರುದ್ಧ ಬಂಧನ ಭೀತಿ ಇಲ್ಲ ಎಂದು ಎಸ್ ಐ ಟಿ ಹೇಳಿದ ಪರಿಣಾಮವಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರೇವಣ್ಣ
ವಾಪಾಸ್ ಪಡೆದಿದ್ದಾರೆ.
ಇದೇ ವೇಳೆ ಎಸ್ ಐಟಿ ತಂಡ ಶುಕ್ರವಾರ ಹಾಸನದ ಹೊಳೆನರಸೀಪುರ ಹಾಗೂ ಪಡುವಲಹಿಪ್ಪೆ ಮತ್ತು ಹಾಸನ ಸಂಸದರ ನಿವಾಸದ ತಪಾಸಣೆ ನಡೆಸಿತು.
ತೋಟದ ಮನೆಯಲ್ಲಿ ಹೋಮ ಮಾಡಿದ್ದ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶವಾಗಿದೆ ಎಂದು ಹೇಳಲಾಗುತ್ತಿದೆ.
ಎಸ್ ಐ ಟಿ ವಿಚಾರಣೆಗೆ ಹಾಜರಾದ
ದೇವೆರಾಜೇ ಗೌಡ ಎಲ್ಲಾ ಸಾಕ್ಷ್ಯಗಳನ್ನು ನೀಡಿದ್ದೇನೆ. ಒಕ್ಕಲಿಗ ನಾಯಕತ್ವಕ್ಕಾಗಿ ಬಡಿದಾಟ ನಡೆದಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.