ಕೋಲಾರ prajakiran.com : ಪಿಯುಸಿಯಲ್ಲಿ ಫೇಲಾದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ವಿದ್ಯಾರ್ಥಿಯೊಬ್ಬ ಬುಧವಾರ ನರಸಾಪುರದ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದರಿಂದ ಬೆಳ್ಳೂರಿನ ರಮಾಮಣಿ ಕಾಲೇಜಿನಲ್ಲಿ ಓದುತ್ತಿದ್ದ ‘ಆದಿತ್ಯ ಚಕ್ರವರ್ತಿ’ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ವಿಷಯದಲ್ಲಿ ಅನುತೀರ್ಣ ಆಗಿದ್ದರಿಂದ ಮನನೊಂದು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಈ ವಿದ್ಯಾರ್ಥಿಯು ಯಾವಾಗಲೂ ಓದಿನಲ್ಲಿ ಮುಂದೆ ಇದ್ದ, ಆದರೆ ಕೊರೋನಾ ಮಾರಿ ಇರುವುದರಿಂದ ಪರೀಕ್ಷೆಗಳು ತಡವಾಗಿ ನಡೆದಿದ್ದವು.
ಇದರಿಂದಾಗಿ ಪಿಯುಸಿ ಆಂಗ್ಲ ಭಾಷೆಯಲ್ಲಿ ಅನುತೀರ್ಣವಾಗಿದ್ದ ಎನ್ನಲಾಗಿದೆ. ಯಾರು ಇಲ್ಲದ ವೇಳೆ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಈ ಘಟನೆಯಿಂದ ಆತನ ಮನೆಯಲ್ಲಿ ಶೋಕದ ವಾತಾವರಣ ಮನೆ ಮಾಡಿದ್ದು, ಗ್ರಾಮಸ್ಥರು ಸಹ ಮರಗಿದ್ದಾರೆ.