ಕಲಬುರಗಿ prajakiran.com : ಮಗಳ ಮದುವೆಗಾಗಿ ಸಾಲ ಮಾಡಿ ತಂದಿದ್ದ 2 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ ನಡೆದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ನಗರದ NGO ಕಾಲೋನಿಯಲ್ಲಿ ಖದೀಮರು ತಮ್ಮ
ಕೈ ಚಳಕ ತೋರಿಸಿದ್ದು, ತಮ್ಮ ಮಗಳ ಮದುವೆಗಾಗಿ ಸಾಲ ಸೂಲ ಮಾಡಿ ತಂದಿಟ್ಟಿದ್ದ ವಸ್ತುಗಳು ಕಳ್ಳತನ ಮಾಡಿದ್ದರಿಂದ
ಕುಟುಂಬದ ಸದಸ್ಯರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಶಂಕರರಾವ್ ಕುಲಕರ್ಣಿ ಎಂಬುವರ ಮನೆಯಲ್ಲಿದ್ದ ಬಟ್ಟೆ, ಪಾತ್ರೆ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.