ಮೈಸೂರು : ಪ್ರೀ ವೆಡ್ಡಿಂಗ್ ಶೂಟಿಂಗ್ ಗೆ ತೆರಳಿದ್ದ ಹುಡುಗ ಮತ್ತು ಹುಡುಗಿ ಸಾವನ್ನಪಿದ ಘಟನೆ ಸೋಮವಾರ ಮೈಸೂರಿನಲ್ಲಿ ನಡೆದಿದೆ.
ಟಿ.ನರಸಿಪುರ ತಾಲ್ಲೂಕಿನ ತಲಕಾಡು ಕಾವೇರಿ ನದಿಯ ಬಳಿ ಈ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಮುಂಚೆ ಹುಡುಗ, ಹುಡುಗಿ ಪ್ರೀ ವೆಡ್ಡಿಂಗ್ ಪೋಟೊಗಳನ್ಬು ತೆಗೆಸುವ ಟ್ರೇಂಡ್ ಆರಂಭವಾಗಿದೆ.
ಅದೇ ರೀತಿ ಟಿ.ನರಸಿಪುರ ತಾಲ್ಲೂಕಿನ ಕಾವೇರಿ ನದಿತೀರವಾದ ತಲಕಾಡಿಗೆ ಇವರಿಬ್ಬರು ತೆರಳಿದ್ದರು.
ಡ್ರೌನ್ ಕ್ಯಾಮರದಲ್ಲಿ ವಿಡಿಯೋ ವನ್ನು ಸೆರೆಹಿಡಿಯಲು ತೆಪ್ಪದ ಮಾಲೀಕನಿಗೆ ತಿಳಿಸಿ ತಪ್ಪದಲ್ಲಿ ತೆರಳಿ ನದಿಯ ಮಧ್ಯದಲ್ಲಿ ಚಿತ್ರೀಕರಣ ನಡೆಸುವ ಸಮಯದಲ್ಲಿ ತೆಪ್ಪ ಮೊಗಚಿ ಈ ಯುವಜೋಡಿ ಸಾವನ್ನಪ್ಪಿದೆ.
ಹುಡುಗ ಚಂದ್ರು ಮತ್ತು ಹುಡುಗಿ ಶಶಿಕಲಾ ಮೈಸೂರಿನ ಕ್ಯಾತಮಾರನಹಳ್ಳಿ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಇಬ್ಬರು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.