ಬೆಂಗಳೂರು prajakiran.com : ಸರ್ಕಾರ ೨ನೇ ಬಾರಿಗೆ ಜಾರಿಗೊಳಿಸಿದ ವಿವಾದಾತ್ಮಕ ಭೂ ಸುಧಾರಣೆ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆಯ ಔಚಿತ್ಯವನ್ನು ಸಹ ಕರ್ನಾಟಕ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.
ಕಳೆದ ಜುಲೈನಲ್ಲಿ ಜಾರಿಗೊಳಿಸಿದ್ದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿದ್ದ ಮೂಲ ದಾವೆದಾರರಾದ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ನಾಗರಾಜ ಹೊಂಗಲ್ ಅವರು, ಸಲ್ಲಿಸಿದ ತಿದ್ದುಪಡಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠ ಸೋಮವಾರ ವಿಚಾರಣೆಗೆ ಅಂಗೀಕರಿಸಿತು.
ಸರಕಾರ ಕಳೆದ ೨ರಂದು ಜಾರಿಗೊಳಿಸಿದ ಸುಗ್ರೀವಾಜ್ಞೆ ೧೯೬೧ರ ಭೂ ಸುಧಾರಣೆ ಕಾಯ್ದೆಯ ಕಲಮು ೭೯ (ಎ), (ಬಿ), (ಸಿ)ಗಳನ್ನು ತೆಗೆದು ಹಾಕಿತ್ತು.
ಇದಲ್ಲದೇ ಕಲಮು ೭೯ರ ಪ್ರಕಾರ ಉಲ್ಲಂಘನೆಯಾಗಿದ್ದ ಪ್ರಕರಣಗಳನ್ನು ೧೯೭೪ರಿಂದ ಪೂರ್ವಾನ್ವಯ ಆಗುವಂತೆ ವಿಲೆಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಭೂ ಖರೀದಿ ಮಿತಿ ನಿಗದಿಗೊಳಿಸುವ ಕಲಮು ೬೩ರನ್ನು ಮುಂಚಿನಂತೆಯೇ ಉಳಿಸಿಕೊಂಡ ಸರಕಾರ, ೨ ನೆ ಬಾರಿ ಜಾರಿಗೊಳಿಸಿರುವ ಸುಗ್ರೀವಾಜ್ಞೆಯಲ್ಲಿ ಕಾರ್ಪೋರೇಟ್ ಕಂಪೆನಿಗಳು, ಟ್ರಸ್ಟಗಳು ಖರೀದಿಸುವ ಜಮೀನಿನ ಪ್ರಮಾಣಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ.
ಇದು ಪರೋಕ್ಷವಾಗಿ ಜಮೀನು ಕಬಳಿಕೆಯನ್ನು ಉತ್ತೇಜಿಸುತ್ತದೆ. ಅಷ್ಟೇಅಲ್ಲ ಸಂವಿಧಾನದ ಮೂಲ ಸ್ವರೂಪಕ್ಕೂ ಧಕ್ಕೆ ತರುವಂಥದ್ದಾಗಿದೆ ಎಂದು ತಿದ್ದುಪಡಿ ಅರ್ಜಿಯಲ್ಲಿ ವಿವರಿಸಲಾಗಿದೆ.
ಇದೇ ಪ್ರಕರಣದಲ್ಲಿ ತಿದ್ದುಪಡಿ ಅರ್ಜಿಗಳನ್ನು ಸಲ್ಲಿಸಲು ನ್ಯಾಯಪೀಠ ಇತರ ಅರ್ಜಿದಾರರಿಗೂ ಅನುಮತಿ ನೀಡಿ, ಡಿಸೆಂಬರ್ ೧ರೊಳಗಾಗಿin ಭಟ್ ಹಾಗೂ ರವೀಂದ್ರ ಡಿ.ಕೆ. ಅವರು ವಕಾಲತ್ತು ವಹಿಸಿದ್ದಾರೆ.