ರಾಜ್ಯ

ಮಾಲೂರು ತಾಲೂಕಿನ ತೊರನಹಳ್ಳಿಯ ಇಬ್ಬರಿಗೆ ಪಾಸಿಟಿವ್

ಮಾಲೂರು prajakiran.com : ದಿನೇ ದಿನೇ ಇಡೀ ಕೋಲಾರ ಜಿಲ್ಲೆಯನ್ನೇ ಆವರಿಸಿಕೊಳ್ಳುತ್ತಿರುವ ಕೊರೋನಾ ಮಾರಿ ಮಾಲೂರು ತಾಲೂಕಿನ ಹಲವು ಹಳ್ಳಿಗಳಿಗೆ ಹಬ್ಬಿರುವ ಈ ವೈರಸ್ ತನ್ನ ಚಾಪನ್ನು ತಾಲೂಕಿನ ಉದ್ದಗಲಕ್ಕೂ ಹರಡಿಸುತ್ತಿದೆ. ತಾಲ್ಲೂಕಿನ ಕಸಬಾ ಹೋಬಳಿ ತೊರನಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. 38 ವರ್ಷದ ಮಹಿಳೆ  ಮತ್ತು 17 ವರ್ಷದ ಯುವಕನಿಗೆ ಈ ಸೋಂಕು ದೃಢಪಟ್ಟಿದೆ. ಇವರು ಮೇಡಹಳ್ಳಿ ಬಳಿ ತಮಗೆ ತಿಳಿದವರ ತೋಟವನ್ನು ಭೋಗ್ಯಕ್ಕೆ ತೆಗೆದುಗೊಂಡು ಬೆಳೆ ಬೆಳೆಯುತ್ತಿದ್ದರು ಎಂದು ತಿಳಿದು […]

ರಾಜ್ಯ

ಕೋಲಾರ ಜಿಲ್ಲೆಯ ನರಸಾಪುರ ಗ್ರಾಮಕ್ಕೂ ವಕ್ಕರಿಸಿದ ಕರೋನಾ

ಕೋಲಾರ prajakiran.com : ಜಿಲ್ಲೆಯಲ್ಲಿ  ನಿಲ್ಲದ ಕೊರೋನಾ ಮಾಹಾಮಾರಿ ಅಟ್ಟಹಾಸ ಇತ್ತೀಚೆಗೆ ನರಸಾಪುರ ಹೋಬಳಿಯ ಚಾಕರಸನಹಳ್ಳಿ, ಉದ್ದಪನಹಳ್ಳಿಗೆ  ಬಂದಿತ್ತು. ಇದೀಗ ಕೊರೋನಾ ಮಾಹಾಮಾರಿ  ನರಸಾಪುರ ಗ್ರಾಮಕ್ಕೂ ಕಾಲಿಟ್ಟಿದೆ.  ನರಸಾಪುರ ಗ್ರಾಮದ ಎ ಬ್ಲಾಕ್ ನಲ್ಲಿ  ಇಬ್ಬರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂದು  ದೃಢಪಟ್ಟಿದೆ. ಈ ವ್ಯಕ್ತಿಗಳು ಇತ್ತೀಚಿಗೆ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ನರಸಾಪುರಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ  ಸ್ಯಾನಿಟೈಶನ್ ಮಾಡಿದರು. ಜೊತೆಗೆ  ಸದರಿ ಪ್ರದೇಶವನ್ನು […]

ಅಪರಾಧ

ಪಿಯುಸಿಯಲ್ಲಿ ಫೇಲಾದ ವಿದ್ಯಾರ್ಥಿ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ

ಕೋಲಾರ prajakiran.com : ಪಿಯುಸಿಯಲ್ಲಿ ಫೇಲಾದ ವಿದ್ಯಾರ್ಥಿಯೊಬ್ಬ  ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ವಿದ್ಯಾರ್ಥಿಯೊಬ್ಬ  ಬುಧವಾರ ನರಸಾಪುರದ  ಕೆರೆಯಲ್ಲಿ ಬಿದ್ದು  ಸಾವಿಗೀಡಾಗಿದ್ದಾನೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದರಿಂದ ಬೆಳ್ಳೂರಿನ ರಮಾಮಣಿ ಕಾಲೇಜಿನಲ್ಲಿ ಓದುತ್ತಿದ್ದ ‘ಆದಿತ್ಯ ಚಕ್ರವರ್ತಿ’ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ವಿಷಯದಲ್ಲಿ ಅನುತೀರ್ಣ  ಆಗಿದ್ದರಿಂದ ಮನನೊಂದು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಈ ವಿದ್ಯಾರ್ಥಿಯು ಯಾವಾಗಲೂ  ಓದಿನಲ್ಲಿ ಮುಂದೆ ಇದ್ದ,  ಆದರೆ […]

ಅಪರಾಧ

ತಹಸೀಲ್ದಾರ್ ಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ….!

ಕೋಲಾರ prajakiran.com : ವಿವಾದಿತ ಜಮೀನಿನ ಸರ್ವೆ ಕಾರ್ಯದ ವೇಳೆ ತಹಸೀಲ್ದಾರ್ ಎದೆಗೆ ನಿವೃತ್ತ ಶಿಕ್ಷಕನೊಬ್ಬ ಮೂರು ಬಾರಿ ಚಾಕು ಇರಿದು ಕೊಂದು ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೋಪನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇಬ್ಬರು ಪರಸ್ಪರ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ವಿವಾದಿತ ಜಮೀನಿನ ಸರ್ವೆ ಮಾಡಲು ಮನವಿ ಮಾಡಿದ್ದರು. ಗುರುವಾರ ಸಂಜೆ ಸರ್ವೇಯರ್ ಹಾಗೂ ಪೊಲೀಸ್ […]