ಧಾರವಾಡ ಪ್ರಜಾಕಿರಣ.ಕಾಮ್ :ಧಾರವಾಡ ಪಶ್ವಿಮ ಶಾಸಕ ಅರವಿಂದ ಬೆಲ್ಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರನ್ನು ಪೋನ್ ನಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಿನ್ನೆ ನಿಧನ ಹೊಂದಿದ ಮಾಳಮಡ್ಡಿಯ ನಿವಾಸಿ ಹಾಗೂ ಶಾಸಕ ಅರವಿಂದ ಬೆಲ್ಲದ ಗೆಳೆಯರಾಗಿದ್ದ ಉಮೇಶ್ ಹೊನ್ನತ್ತಿ ವಕೀಲರ ಅಂತ್ಯ ಸಂಸ್ಕಾರಕ್ಕೆ ಬಂದಾಗ ಹೊಸಯಲ್ಲಾಪುರ
ರಸ್ತೆ ಅವ್ಯವಸ್ಥೆ ಕಂಡು ಕೆಲಕಾಲ ವಿಚಲಿತಗೊಂಡರು.
ಕೆರೆಯಿಂದ ರುದ್ರ ಭೂಮಿಗೆ ಹೋಗುವ ಹಾದಿಯಲ್ಲಿ ನಾಯಿಯ, ಹಂದಿಯ, ಬೆಕ್ಕಿನ ಸತ್ತ ನಾರುವ ದೇಹಗಳ ರ್ದುವಾಸನೆ ನೋಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಆಕ್ರೋಶ ಹೊರ ಹಾಕಿದರು.
ನಾನು ನನ್ನ ಗೆಳೆಯನ ಶವ ಸಂಸ್ಕಾರಕ್ಕೆ ಬಂದಿದ್ದೇನೆ. ಮನುಷ್ಯನು ಸಹಿತ ದಾಟದ ಪರಿಸ್ಥಿತಿ ಈ ಹಾದಿಯಲ್ಲಿದೆ.
ಏನು ಮಾಡುತ್ತಾ ಇದ್ದಾರೆ ನಿಮ್ಮ ಸಿಬ್ಬಂದಿಗಳು ಎಂದು ಪ್ರಶ್ನಿಸಿದರು.
ಅಲ್ಲದೆ, ತಕ್ಷಣ ನಾನು ಇಲ್ಲಿಂದ ಹೋಗುವುದರೊಳಗೆ ಸಂಪೂರ್ಣ ಕ್ಲೀನ್ ಆಗಬೇಕು.
ಯಾರು ಇಲ್ಲಿ ಇಂಚಾರ್ಜ್ ಇದ್ದಾರೋ ಅವರನ್ನ ತಕ್ಷಣ ಸಸ್ಪೆಂಡ್ ಮಾಡಿ ಎಂದು ತಿಳಿಸಿದರು.
ನಿತ್ಯ ನನಗೆ ಇದರ ರಿಪೋರ್ಟ್ ಬೇಕು. ಪ್ರತಿ ದಿನ ಈ ಹಾದಿ ಸ್ವಚ್ಛವಾಗಿ ಹಾಗೂ ಸುಸಜ್ಜಿತವಾಗಿ ಶವ ಸಂಸ್ಕಾರಕ್ಕೆ ಹೋಗುವ ಯಾರಿಗೂ ತೊಂದರೆ ಆಗಬಾರದು ಎಂದು ಖಡಕ್ಕಾಗಿ ಆದೇಶ ಮಾಡಿದರು.
ಎಲೆಕ್ಟ್ರಿಕ್ ಅಥವಾ ಸಿಲಿಂಡರ್ ಚಿತಾಗಾರ ವನ್ನು ತಕ್ಷಣ ಇಲ್ಲಿ ಕಾರ್ಪೊರೇಷನ್ ಇಂದಾಗಲಿ ಅಥವಾ ಸರ್ಕಾರದಿಂದ ಆಗಲಿ ಇಲ್ಲಿ ನಿರ್ಮಿಸಲು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಗೆಳೆಯನ ಶವ ಸಂಸ್ಕಾರಕ್ಕೆ ಬಂದು. ಅಭಿವೃದ್ಧಿಯ ದೃಷ್ಟಿಕೋನವನಿಟ್ಟು ಮಾನವೀಯತೆ ಮೆರೆದ ಶಾಸಕ ಅರವಿಂದ ಬೆಲ್ಲದ ನಡೆಯನ್ನು ಸ್ಥಳಿಯರು ಸ್ವಾಗತಿಸಿದರು.
ತಕ್ಷಣ ಕ್ರಮ ತೆಗೆದುಕೊಂಡ ಮಹಾನಗರ ಪಾಲಿಕೆ ಆಯುಕ್ತರು
ಶವ ಸಂಸ್ಕಾರ ಮುಗಿಸಿ ಬರುವ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಮಹಾನಗರ ಪಾಲಿಕೆ ಸಿಬ್ಬಂದಿ ಸಂಪೂರ್ಣವಾಗಿ ರಸ್ತೆ ಸ್ವಚ್ಛ ಮಾಡಿದ್ದರು.
ಅಂತ್ಯ ಸಂಸ್ಕಾರಕ್ಕೆ ಬಂದ ಅನೇಕರು ಇಂತಹ ಶಾಸಕರು ಇರುವುದು ನಮ್ಮ ಹೆಮ್ಮೆ, ಪ್ರಜ್ಞಾವಂತ ಶಾಸಕ ನಮ್ಮವನಾಗಿದ್ದಾನೆ ಎಂದು ಧನ್ಯವಾದಗಳು ತಿಳಿಸಿದರು.