ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಗೃಹ ಸಚಿವ ಡಾ. ಜಿ. ಪರಮೇಶ್ವರ ಕೊನೆಗೂ ಹುಬ್ಬಳ್ಳಿಯ
ಅಂಜಲಿ ಅಂಬಿಗೇರ ಮತ್ತು ನೇಹಾ ಹಿರೇಮಠ ಕುಟುಂಬದ ಸದಸ್ಯರ ಭೇಟಿ ಮಾಡಿ ಸಾಂತ್ವಾನ ಹೇಳಿದರು.
ಅವರ ಭೇಟಿಯ ಬೆನ್ನ ಹಿಂದೆಯೇ ಇಬ್ಬರು ಯುವತಿಯರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹುಬ್ಬಳ್ಳಿ ದಕ್ಷಿಣ ಎಸಿಪಿ ವಿಜಯ್ ಕುಮಾರ ತಳವಾರ ಅವರನ್ನು ಅಮಾನತ್ತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ಈ ಪ್ರಕರಣದಲ್ಲಿ ಡಿಸಿಪಿ ಪಿ. ರಾಜೀವ್, ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಅಮಾನತು ಮಾಡಲಾಗಿತ್ತು. ಇದರಿಂದಾಗಿ ನಾಲ್ವರ ತಲೆದಂಡವಾದಂತಾಗಿದೆ.
ಗೃಹ ಸಚಿವ ಜಿ.ಪರಮೇಶ್ವರ ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಯಾರೇ ತಪ್ಪು ಮಾಡಿದರು ಯಾವುದೇ ಜಾತಿ ಮತ ನೋಡದೆ ಕ್ರಮ ತೆಗೆದುಕೊಳ್ಳುತ್ತೆವೆ ಎಂದು ಹೇಳಿದ್ದರು.
ಸುದ್ದಿಗೊಷ್ಠಿ ಮುಗಿಯುತ್ತಲೇ ಎಸಿಪಿ ವಿಜಯ್ ಕುಮಾರ್ ತಳವಾರ ಅಮಾನತು ಆದೇಶ ಹೊರಬಿದ್ದಿದೆ.
ನಿನ್ನೆ ಡಿಸಿಪಿ ರಾಜೀವ ಇಂದು ಎಸಿಪಿ ವಿಜಯ್ ಕುಮಾರ್ ತಳವಾರ್ ಅಮಾನತು ಮಾಡಿರುವುದು ಹುಬ್ಬಳ್ಳಿ ಧಾರವಾಡ ಅವಳಿನಗರ ಪೊಲೀಸರ ನಿದ್ದೆಗೆಡಿಸಿದೆ.
ನಿನ್ನೆ ಎಡಿಜಿಪಿ ಹಿತೇಂದ್ರ ಆರ್ ಭೇಟಿ ನೀಡಿದ ಬಳಿಕ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿ ಅವಳಿ ನಗರ ಪೊಲೀಸರಿಗೆ ಸ್ವಲ್ಪ ಮಟ್ಟಿಗೆ ಚುರುಕು ಮೂಡಿಸುವ ಕೆಲಸ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.