ರಾಜ್ಯ

ಧಾರವಾಡದಲ್ಲಿ ಹತ್ತು ದಿನ ಕಳೆದರೂ ಬಾರದ ಗಂಟಲು ತಪಾಸಣೆ ವರದಿ : ಕಂಗಲಾದ ಪೊಲೀಸರು….!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಾರದಿರುವುದು ಒಂದಡೆಯಾದರೆ ಇನ್ನೊಂದಡೆ ಕರೋನಾ ತಪಾಸಣೆ ವರದಿ ಕೂಡ ಸಾಕಷ್ಟು ಪ್ರಮಾಣದಲ್ಲಿ ವಿಳಂಭವಾಗುತ್ತಿರುವುದು ಬೆಳಕಿಗೆ ಬರುತ್ತಿದೆ.

ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರೊಬ್ಬರ ವರದಿ ಹತ್ತು ದಿನಗಳು ಕಳೆದರೂ ಬಾರದಿರುವುದು ಕರೋನಾ ಗಂಟಲು ತಪಾಸಣೆ ಮಾಡಿಸಿಕೊಂಡ ಪೊಲೀಸ ಇಲಾಖೆ ಹಾಗೂ ಇತರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಧಾರವಾಡ ಜಿಲ್ಲಾಡಳಿತ ಉದಾಸೀನತೆ ತೋರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಇದರಿಂದಾಗಿ ಪೊಲೀಸರು ಕಂಗಲಾಗಿದ್ದಾರೆ. ಕರೋನಾ ಸೇನಾನಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನೂ ಜನಸಾಮಾನ್ಯರ ಗತಿಯೇನುಎಂಬ ಪ್ರಶ್ನೆಯು ಎದುರಾಗಿದೆ.

ಆದರೆ ಈ ಬಗ್ಗೆ ಯಾವ ಬಳಿಯೂ ಸಮರ್ಪಕ ಉತ್ತರವಿಲ್ಲ. ಈ ಕುರಿತು ಯಾರಾದರೂ ವಿಚಾರಿಸಿದರೆ, ಬರುತ್ತದೆ.

ಸ್ವಲ್ಪ ವಿಳಂಭವಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಅಗತ್ಯ ಕ್ರಮ ಜರುಗಿಸಲಾಗುವುದು ಎಂಬ ಸಿದ್ದ ಉತ್ತರಗಳು ಬರುತ್ತಿವೆ.

ಇನ್ನೂ ಈ ಕುರಿತು ಪ್ರಜಾಕಿರಣ.ಕಾಮ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಒಂದೊಂದು ಪ್ರಕರಣದಲ್ಲಿ ಮಾತ್ರ ವಿಳಂಬವಾಗುತ್ತಿದೆ.

ಈಗ ಅಂಟಿಜೆನ್ ತಪಾಸಣೆ ಬಂದಿದೆ. ಶೀಘ್ರದಲ್ಲಿಯೇ ತಪಾಸಣೆ ವರದಿ ಬರುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಸಮಜಾಯಿಸಿನೀಡಿದ್ದಾರೆ.

 

 

 

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *