ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಾರದಿರುವುದು ಒಂದಡೆಯಾದರೆ ಇನ್ನೊಂದಡೆ ಕರೋನಾ ತಪಾಸಣೆ ವರದಿ ಕೂಡ ಸಾಕಷ್ಟು ಪ್ರಮಾಣದಲ್ಲಿ ವಿಳಂಭವಾಗುತ್ತಿರುವುದು ಬೆಳಕಿಗೆ ಬರುತ್ತಿದೆ.
ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸರೊಬ್ಬರ ವರದಿ ಹತ್ತು ದಿನಗಳು ಕಳೆದರೂ ಬಾರದಿರುವುದು ಕರೋನಾ ಗಂಟಲು ತಪಾಸಣೆ ಮಾಡಿಸಿಕೊಂಡ ಪೊಲೀಸ ಇಲಾಖೆ ಹಾಗೂ ಇತರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ ಧಾರವಾಡ ಜಿಲ್ಲಾಡಳಿತ ಉದಾಸೀನತೆ ತೋರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇದರಿಂದಾಗಿ ಪೊಲೀಸರು ಕಂಗಲಾಗಿದ್ದಾರೆ. ಕರೋನಾ ಸೇನಾನಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನೂ ಜನಸಾಮಾನ್ಯರ ಗತಿಯೇನುಎಂಬ ಪ್ರಶ್ನೆಯು ಎದುರಾಗಿದೆ.
ಆದರೆ ಈ ಬಗ್ಗೆ ಯಾವ ಬಳಿಯೂ ಸಮರ್ಪಕ ಉತ್ತರವಿಲ್ಲ. ಈ ಕುರಿತು ಯಾರಾದರೂ ವಿಚಾರಿಸಿದರೆ, ಬರುತ್ತದೆ.
ಸ್ವಲ್ಪ ವಿಳಂಭವಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಅಗತ್ಯ ಕ್ರಮ ಜರುಗಿಸಲಾಗುವುದು ಎಂಬ ಸಿದ್ದ ಉತ್ತರಗಳು ಬರುತ್ತಿವೆ.
ಇನ್ನೂ ಈ ಕುರಿತು ಪ್ರಜಾಕಿರಣ.ಕಾಮ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಒಂದೊಂದು ಪ್ರಕರಣದಲ್ಲಿ ಮಾತ್ರ ವಿಳಂಬವಾಗುತ್ತಿದೆ.
ಈಗ ಅಂಟಿಜೆನ್ ತಪಾಸಣೆ ಬಂದಿದೆ. ಶೀಘ್ರದಲ್ಲಿಯೇ ತಪಾಸಣೆ ವರದಿ ಬರುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಸಮಜಾಯಿಸಿನೀಡಿದ್ದಾರೆ.