ರಾಜ್ಯ

ಧಾರವಾಡದ ಬಿ ಆರ್ ಟಿ ಎಸ್ ಗುತ್ತಿಗೆದಾರ, ಇಂಜಿನಿಯರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ  

ಧಾರವಾಡ prajakiran.com : ಧಾರವಾಡದ ನವಲೂರು ಬಳಿ ಬಿಆರ್ ಟಿ ಎಸ್ ಬ್ರಿಜ್ ಕುಸಿತ ಕುರಿತು ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು  ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಅಪೂರ್ಣಗೊಂಡಿರುವ ಮೇಲ್ ಸೇತುವೆ ಸಿಮೆಂಟ್ ಬ್ಲ್ಯಾಕ್ ಗಳು ಹಾಗೂ ಮಣ್ಣು ಕುಸಿದಿರುವುದು ಸ್ಥಳೀಯರು ಗಮನಕ್ಕೆ ತಂದಿದ್ದಾರೆ.

ಇದು ಕುಸಿದು ಬೀಳಬಹುದು ಎಂದು ಗ್ರಾಮಸ್ಥರು ಈ ಹಿಂದೆಯೇ ನನಗೆ ಮಾಹಿತಿ ನೀಡಿದ್ದರು. ನಾನು ಕೂಡ ಈ ಬಗ್ಗೆ ಬಿ ಆರ್ ಟಿ ಎಸ್ ಸಭೆಯಲ್ಲಿ ಗಮನ ಸೆಳೆದಿದ್ದೇನೆ. ಆದರೂ ಅವರು ಕ್ರಮ ಕೈಗೊಳ್ಳುವ ಬದಲಿಗೆ ನಿರ್ಲಕ್ಷ್ಯ ತೋರಿಸಿದ್ದರು.

ಈ ಸೇತುವೆ ಕುಸಿತದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಕಾಮಗಾರಿ ಮಾಡಿರುವ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲೇಬೇಕು.

ಒಂದು ಸಾವಿರ ಕೋಟಿ ರೂಪಾಯಿ ಹಣ ವ್ಯಯಿಸಿ ಮಾಡಿದ ಕಾಮಗಾರಿಯನ್ನು ಸರಿಯಾಗಿ ಮಾಡಿಲ್ಲ ಎಂದು ಮತ್ತೇ ಶಾಸಕಅರವಿಂದ ಬೆಲ್ಲದ ಆರೋಪಿಸಿ, ತಮ್ಮಅಸಮಾಧಾನ ಹೊರ ಹಾಕಿದರು.

 ಈ ಹಿಂದೆ ಕೂಡ ಶಾಸಕ ಅರವಿಂದ ಬೆಲ್ಲದ ಅವರು ಬಿ ಆರ್ ಟಿ ಎಸ್ ವಿರುದ್ದ ತಮ್ಮ ಅಸಮಾಧಾನವನ್ನು ಮಾಧ್ಯಮಗಳ ಮೂಲಕ ಹೊರ ಹಾಕಿದ್ದರು.

ಆಗ ಅದಕ್ಕೆ ಸಮಜಾಯಿಸಿ ನೀಡಿ, ಆರೋಪಿಸುವುದು ಸುಲಭ.ಅದನ್ನು ನಿರ್ವಹಿಸುವುದು ಕಷ್ಟದ ಕೆಲಸ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ  ಜಗದೀಶ ಶೆಟ್ಟರ್ ಅದಕ್ಕೆ ತೇಪೆ ಹಾಕುವ ಕೆಲಸ ಮಾಡಿ ಶಾಸಕ ಬೆಲ್ಲದರನ್ನು ಸಮಾಧಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *