ರಾಜ್ಯ

ಹುಬ್ಬಳ್ಳಿ-ಧಾರವಾಡ ಅವಳಿನಗರ ನಡುವಿನ ಬಿಆರ್‌ಟಿಎಸ್ ಯೋಜನೆ ಕರ್ಮಕಾಂಡ ಬಿಚ್ಚಿಟ್ಟ ನೀರಲಕೇರಿ

ಧಾರವಾಡ prajakiran.com : ಹುಬ್ಬಳ್ಳಿ–ಧಾರವಾಡ ಅವಳಿನಗರ ನಡುವಿನ ಬಿಆರ್‌ಟಿಎಸ್ ಯೋಜನೆಯ ಕಳಪೆ ಕಾಮಗಾರಿ ಯಿಂದಾಗಿ ನವಲೂರು ಬಳಿಯ ಸೇತುವೆ ಪಿಲ್ಲರ್ ಕ್ರ್ಯಾಕ್ ಬಿಟ್ಟಿದೆ. ಏನಾದರೂ ದೊಡ್ಡ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಹೈಕೋರ್ಟ್ ವಕೀಲರು  ಆಗಿರುವ ಕಾಂಗ್ರೆಸ್ ಮುಖಂಡ  ಪಿ.ಎಚ್.ನೀರಲಕೇರಿ ಕಿಡಿಕಾರಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಕರ್ಮಕಾಂಡವನ್ನು ಎಳೆ ಎಳೇಯಾಗಿ ಬಿಡಿಸಿಟ್ಟರು. ಕಳಪೆ ಕಾಮಗಾರಿಯ ಲೋಪಗಳ ಬಗ್ಗೆ ಒಂದು ತಿಂಗಳೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಶಾಸಕರು […]

ರಾಜ್ಯ

ಧಾರವಾಡದ ಬಿ ಆರ್ ಟಿ ಎಸ್ ಗುತ್ತಿಗೆದಾರ, ಇಂಜಿನಿಯರ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ  

ಧಾರವಾಡ prajakiran.com : ಧಾರವಾಡದ ನವಲೂರು ಬಳಿ ಬಿಆರ್ ಟಿ ಎಸ್ ಬ್ರಿಜ್ ಕುಸಿತ ಕುರಿತು ಸರಕಾರಕ್ಕೆ ಪತ್ರ ಬರೆಯುತ್ತೇನೆ ಎಂದು  ಧಾರವಾಡ ಪಶ್ಚಿಮ ಬಿಜೆಪಿ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ಅಪೂರ್ಣಗೊಂಡಿರುವ ಮೇಲ್ ಸೇತುವೆ ಸಿಮೆಂಟ್ ಬ್ಲ್ಯಾಕ್ ಗಳು ಹಾಗೂ ಮಣ್ಣು ಕುಸಿದಿರುವುದು ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ಇದು ಕುಸಿದು ಬೀಳಬಹುದು ಎಂದು ಗ್ರಾಮಸ್ಥರು ಈ ಹಿಂದೆಯೇ ನನಗೆ ಮಾಹಿತಿ ನೀಡಿದ್ದರು. ನಾನು ಕೂಡ ಈ ಬಗ್ಗೆ ಬಿ ಆರ್ ಟಿ ಎಸ್ ಸಭೆಯಲ್ಲಿ ಗಮನ […]

ರಾಜ್ಯ

ಧಾರವಾಡದ ನವಲೂರಿನ ಬಿಆರ್ ಟಿ ಎಸ್ ಬ್ರಿಜ್ ಬಲ ಬದಿಯಲ್ಲಿ ಕುಸಿತ …!

ಕಂಗಲಾದ ಹುಬ್ಬಳ್ಳಿ-ಧಾರವಾಡದ ಜನತೆ ಧಾರವಾಡ prajakiran.com  : ಹುಬ್ಬಳ್ಳಿ-ಧಾರವಾಡ ನಡುವೆ ವೇಗವಾಗಿ ಸಂಪರ್ಕ ಕಲ್ಪಿಸುವ ಮಹತ್ವಾಂಕ್ಷಿ ಬಿ ಆರ್ ಟಿ ಎಸ್ ರಸ್ತೆ ನಿರ್ಮಾಣ ಆರಂಭದಿಂದಲೂ ಒಂದಿಲ್ಲ ಒಂದು ಯಡವಟ್ಟಿನಿಂದ ಸುದ್ದಿಯಲ್ಲಿದೆ. ಕಳೆದ ವರ್ಷವಷ್ಟೇ ಧಾರವಾಡದ ನವಲೂರಿನ ಬ್ರಿಜ್ ಉದ್ಘಾಟನೆಗೆ ಮುನ್ನವೇ ಬಿರುಕು ಬಿಟ್ಟಿದ್ದರಿಂದ ಕೆಲ ದಿನಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಸ್ವತಃ ಧಾರವಾಡ ಪಶ್ಚಿಮ ಶಾಸಕಅರವಿಂದ ಬೆಲ್ಲದ ಅವರು ಕೂಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ […]