ಧಾರವಾಡ prajakiran.com : ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿ ಎಲ್ಲರೂ ಸಚಿವ ಸ್ಥಾನ ಆಕಾಂಕ್ಷಿಗಳೇ. ಎಂಎಲ್ಎ ಆದ ಎಲ್ಲರಿಗೂ ಮುಂದಿನ ಸ್ಥಾನಕ್ಕೆ ಹೋಗುವ ಅಪೇಕ್ಷೆ ಇರುತ್ತದೆ ಎಂದು ತಿಳಿಸಿದರು.
ಫಿಲ್ಡ್ ನಲ್ಲಿ ಇರುವವರ ಮನಸ್ಸಿನಲ್ಲಿ ಅವಶ್ಯಕವಾಗಿ ಆ ಆಕಾಂಕ್ಷೆ ಇದ್ದೆ ಇರುತ್ತದೆ. ನಮ್ಮ ಪಕ್ಷ ಮತ್ತು ನಾಯಕತ್ವ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಯಾವ ಸಂದರ್ಭದಲ್ಲಿ ಯಾರಿಗೆ ಅವಕಾಶ ಕೊಡಬೇಕು ಅವರಿಗೆ ಬಿಟ್ಟಿರುವಂತಹುದು ಸಚಿವ ಸ್ಥಾನದ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನಾಯಕರು ಸೂಕ್ತ ಟೈಮ್ ಬಂದಾಗ ಸೂಕ್ತ ನಿರ್ಧಾರ ತಗೋತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಹೋದ ಕಡೆಯಲ್ಲ ಕ್ಷೇತ್ರದ ಜನ ಸಚಿವ ಆಗಬೇಕು ಅಂತಿದಾರೆ. ಜನರು ತಮ್ಮ ಅಪೇಕ್ಷೆ ವ್ಯಕ್ತಪಡಿಸುತ್ತಾರೆ. ನಮ್ಮ ಕ್ಷೇತ್ರಕ್ಕೆ ಮಂತ್ರಿ ಆಗಬೇಕು ಅಂತಾ ಅಪೇಕ್ಷೆ ಅವರಿಗೂ ಇರುತ್ತದೆ ಎಂದರು.
ಆದರೆ ಸಚಿವ ಸ್ಥಾನ ಕೇಳುವ ಅವಶ್ಯಕತೆ ನನಗಿಲ್ಲ. ಯಾವಾಗ ಗುರುತಿಸಿ ಸ್ಥಾನ ಕೊಡಬೇಕೋ ಕೊಡುತ್ತಾರೆ ಎಂದ ಶಾಸಕಅರವಿಂದ ಬೆಲ್ಲದ ಸಿಎಂ ಬದಲಾವಣೆ ವಿಚಾರ ಕೇವಲ ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದರು.