ಬೈಲಹೊಂಗಲ prajakiran.com : ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಕಾಯಿಲೆಯ ನಿಯಂತ್ರಣ ಮಾಡಲು ಜು 16 ರಿಂದ 25 ರ ವೆರೆಗೆ ಬೈಲಹೊಂಗಲ ತಾಲೂಕು ಲಾಕಡೌನ ಮಾಡಲಾಗಿದ್ದು, ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಅವರು ಮಂಗಳವಾರ ವ್ಯಾಪಾರಸ್ಥರ ಸಭೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ಪ್ರಕಟಿಸಿದರು.
ಕಾಯಿಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರಣ ಲಾಕಡೌನ ಅತೀ ಅವಶ್ಯಕವಿರುವದರಿಂದ ಈ ಕ್ರಮ ಜರುಗಿಸಲಾಗಿದ್ದು ಲಾಕಡೌನ ಸಮಯದಲ್ಲಿ 12 ರಿಂದ ಬೆಳಗಿನ 7 ಘಂಟೆ ಅವಧಿಯಲ್ಲಿ 144 ಕಲಂ ಜಾರಿಯಲ್ಲಿರುತ್ತದೆ.
ಕಾರಣ ಯಾವುದೇ ವ್ಯಕ್ತಿ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು. ಮತ್ತು ಲಾಕಡೌನ ನೆಪದಲ್ಲಿ ವ್ಯಾಪಾರಸ್ಥರು ದಿನಸಿ ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಾಸ ಮಾಡಿದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವದು ಎಂದರು.
ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ತಹಶೀಲ್ದಾರ ಡಾ. ದೊಡ್ಡಪ್ಪ ಹೂಗಾರ, ವೈದ್ಯಾಧಿಕಾರಿ ಡಾ. ಸಂಜಯ ಸಿದ್ದನ್ನವರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.