ಧಾರವಾಡ prajakiran.com : ದೇಶದ ನೂರಾರು ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದು,ಅಲ್ಲಿಯ ಹೈಫೈ ಸೌಲಭ್ಯ ಪಡೆದು ಕೊನೆಗೆ ದುಡ್ಡೂ ಕೊಡದೇ ಪರಾರಿಯಾಗುತ್ತಿದ್ದ ಹೋಟೆಲ್ ವಂಚಕನನ್ನು ಕೊನೆಗೂ ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಈತ ಜುಲೈ 24 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬಳಿ ಇರುವ ದ್ವಾರವಾಟಾ ಹೋಟೆಲ್ ನಲ್ಲಿ ಹಲವು ದಿನ ತಂಗಿದ್ದ.
ಅಲ್ಲದೆ, ಹೋಟೆಲ್ ನ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಮ್ಯಾನೇಜರ್ ಲ್ಯಾಪಟಾಪ್ ಸಮೇತ ಹೋಟೆಲ್ ಬಿಲ್ ಪಾವತಿಸದೆ ಜಾಗ ಖಾಲಿ ಮಾಡಿದ್ದ.
ಈ ಸಂಬಂಧ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನ ಚಲನವಲನಗಳನ್ನು ಸಿಸಿ ಟಿವಿಯಲ್ಲಿ ಗಮನಿಸಿ ಈ ರೀತಿ ಹಲವರಿಗೆ ವಂಚಿಸಿರುವುದು ಬೆಳಕಿಗೆ ಬಂದಿತ್ತು.
ಆನಂತರ ಈತ ಭೀಮ್ಸೆಂಟ್ ಜಾನ್ ಎಂದು ಗುರುತಿಸಲಾಗಿತ್ತು. ಇದೇ ತರಹ ಬೆಳಗಾವಿಯಲ್ಲಿ ವಂಚನೆ ಮಾಡಲು ಹೋಗಿ ಅಲ್ಲಿನ ಹೋಟೆಲ್ ಸಿಬ್ಬಂದಿಗೆ ಭೀಮ್ಸೆಂಟ್ ಜಾನ್ ತಗಲಾಕಿಕೊಂಡಿದ್ದಾನೆ.
ತಕ್ಷಣ ಜಾಗೃತಗೊಂಡ ಹೋಟೆಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ಆತನನ್ನು ಒಪ್ಪಿಸಿದ್ದಾರೆ.
ಧಾರವಾಡದಲ್ಲಿ ಈತನ ಮೇಲೆ ದೂರು ದಾಖಲಾಗಿದ್ದರಿಂದ ಉಪನಗರ ಠಾಣೆ ಪೊಲೀಸರು ಬಂಧಿಸಿ ಧಾರವಾಡಕ್ಕೆ ಕರೆತಂದಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.