ಹುಬ್ಬಳ್ಳಿ prajakiran.com : ಲಾಕ್ ಡೌನ್ ಎಫೆಕ್ಟ್ ನಿಂದ ಉಂಟಾದ ನಿರುದ್ಯೋಗ ಸಮಸ್ಯೆ ಹಾಗೂ ಸಾಲಭಾದೆ ತಾಳಲಾರದೇ ಲಾರಿ ಚಾಲಕನೊಬ್ಬ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ವಿಜಯಪುರ ರಸ್ತೆಯ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರೇವಡಿಹಾಳ ಗ್ರಾಮದ ದುರ್ಗೇಶ ರಾಮಪ್ಪ ದೊಡ್ಡಮನಿ(೨೪) ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು ಎಂದು ಗೊತ್ತಾಗಿದೆ.
ಲಾರಿ ಚಾಲಕನಾಗಿದ್ದ ಈತ ಲಾಕ್ ಡೌನ್ ಪರಿಣಾಮದಿಂದ ನಿರುದ್ಯೋಗಿ ಆಗಿದ್ದ. ಇದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ.
ಸೋಮವಾರ ಹುಬ್ಬಳ್ಳಿಯಲ್ಲಿ ಅವರ ಸಂಬಂಧಿಕರಿಗೆ ಭೇಟಿಯಾಗಲು ಬಂದಿದ್ದ. ಮರಳಿ ಊರಿಗೆ ಹೋಗುವುದಾಗಿ ಹೇಳಿ ಹೋಗಿ ಬ್ರಿಡ್ಜ್ ಬಳಿಯ ಮರವೊಂದಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.