ಅಪರಾಧ

ಕೃಷ್ಣಾನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ…..!

ವಿಜಯಪುರ prajakiran.com :  ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದು ಮಾನಸಿಕ ಅಸ್ವಸ್ಥ ಮಗಳೊಂದಿಗೆ ತಾಯಿಕೂಡ ಕೃಷ್ಣಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಬಳೂಕಿ ಜಾಕ್ ವೆಲ್ ನಲ್ಲಿ ಭಾನುವಾರ ಈ ರ್ದುಘಟನೆ ನಡೆದಿದೆ ಮೃತರನ್ನು ಶಕುಂತಲಾ ಖೇಡ್ ( 50) ಹಾಗೂ ಗಂಗಾ ( 22 ) ಎಂದು ಗುರುತಿಸಲಾಗಿದೆ. ಶಕುಂತಲಾ ಅವರ ಪತಿ ಸಿದ್ದಣ್ಣ ಖೇಡ್ ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ […]

ಅಪರಾಧ

ಧಾರವಾಡದಲ್ಲಿ ಚಪ್ಪಲಿ ಅಂಗಡಿ ಬೆಂಕಿ : ಲಕ್ಷಾಂತರ ರೂಪಾಯಿ ಹಾನಿ

ಧಾರವಾಡ  prajakiran.com : ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಚಪ್ಪಲಿ ಅಂಗಡಿವೊಂದು ಸುಟ್ಟು ಲಕ್ಷಾಂತರ ರೂಪಾಯಿ ಸಂಭವಿಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಕಳೆದ ರಾತ್ರಿ ಈ ದುರಂತ ಸಂಭವಿಸಿದೆ. ರಾಜು ಬಳ್ಳಾರಿ ಎಂಬುವವರಿಗೆ ಸೇರಿದ ಚಪ್ಪಲ ಅಂಗಡಿ, ಇದಾಗಿದ್ದು, ಇದರಿಂದಾಗಿ ಸುಮಾರು 2  ಲಕ್ಷಕ್ಕೂ ಹೆಚ್ಚು ವಸ್ತುಗಳು ಸುಟ್ಟ ಭಸ್ಮವಾಗಿದೆ ಎಂದು ಅಂಗಡಿ ಮಾಲೀಕ ಅಳಲು ತೋಡಿಕೊಂಡಿದ್ದಾನೆ. ಕಳೆದ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ  ಈ ಅಗ್ನಿ ಆಕಸ್ಮಿಕ […]

ಅಪರಾಧ

ರಾಯಚೂರು ಜಿಲ್ಲೆಯಲ್ಲಿ ಹಾಡ ಹಗಲೇ ನಾಲ್ವರ ಬರ್ಬರ ಕೊಲೆ

ರಾಯಚೂರು prajakiran.com  : ಹಳೆ ವೈಷಮ್ಯ ಹಾಗೂ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಾಲ್ವರನ್ನು ಹಾಡ ಹಗಲೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಸಿಂಧನೂರು ನಗರದ ಸುಕಾಲಪೇಟೆಯ ಮನೆಯ ಮುಂದೆ ಇಬ್ಬರು ಪುರುಷರು, ಇಬ್ಬರ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದವರನ್ನು ಸಾವಿತ್ರಮ್ಮ (55), ಶ್ರೀದೇವಿ(38), ಹನುಮೇಶ್ (35) ನಾಗರಾಜ್ (33) ಎಂದು ಗುರುತಿಸಲಾಗಿದೆ. ಅಲ್ಲದೆ, ಈ ಘಟನೆಯಲ್ಲಿ‌ ಇನ್ನೂ ಮೂವರಿಗೆ  ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ  ಆಸ್ಪತ್ರೆಗೆ ದಾಖಲಿಸಿ […]

ಅಪರಾಧ

ಧಾರವಾಡದಲ್ಲಿ ಕೆಲ ಕಾಲ ಭಯ ಹುಟ್ಟಿಸಿದ ಅನಾಥ ಶವ….!

ಧಾರವಾಡ prajakiran.com : ಧಾರವಾಡದ ಸುಭಾಸ ರಸ್ತೆಯ ಕೆಸಿಸಿ ಬ್ಯಾಂಕ್ ಪಕ್ಕದ ಹೋಟೆಲ್ ಎದುರು ಪತ್ತೆಯಾದ‌ ವ್ಯಕ್ತಿಯ ಶವ ಶುಕ್ರವಾರ ಕೆಲ ಕಾಲ ಸ್ಥಳೀಯರಿಗೆ ಭಯ ಹುಟ್ಟಿಸಿತ್ತು. ಸುಮಾರು ೪೫ ವರ್ಷದ ವ್ಯಕ್ತಿ ಬೆಳ್ಳಂ ಬೆಳಗ್ಗೆ ಹೋಟೆಲ್ ಮುಂದೆ ಶವವಾಗಿ ಪತ್ತೆಯಾಗಿದ್ದ. ಬೆಳಗ್ಗೆ ಅಂಗಡಿ ಮಾಲೀಕ ಬಂದಾಗ ಈ ಮಾಹಿತಿ ತಿಳಿದು ಬೆಚ್ಚಿಬಿದ್ದಿದ್ದ. ತಕ್ಷಣ ಸ್ಥಳೀಯರು ಅಕ್ಕ ಪಕ್ಕದ ಅಂಗಡಿಯವರು ಕೂಡಲೇ ಜಿಲ್ಲಾಡಳಿತದ ಕಂಟ್ರೋಲ್ ರೂಂ.ಗೆ, ೧೦೮ ಸಿಬ್ಬಂದಿಗೆ ಸಹ ಮಾಹಿತಿ ನೀಡಿದ್ದರು.  ಆನಂತರ ಸ್ಥಳಕ್ಕೆ ಬಂದಅಂಬುಲೈನ್ಸ್ […]

ಅಪರಾಧ

ತಹಸೀಲ್ದಾರ್ ಗೆ ಚಾಕು ಇರಿದು ಕೊಂದ ನಿವೃತ್ತ ಶಿಕ್ಷಕ….!

ಕೋಲಾರ prajakiran.com : ವಿವಾದಿತ ಜಮೀನಿನ ಸರ್ವೆ ಕಾರ್ಯದ ವೇಳೆ ತಹಸೀಲ್ದಾರ್ ಎದೆಗೆ ನಿವೃತ್ತ ಶಿಕ್ಷಕನೊಬ್ಬ ಮೂರು ಬಾರಿ ಚಾಕು ಇರಿದು ಕೊಂದು ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೋಪನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳವಂಚಿ ಗ್ರಾಮದ ರಾಮಮೂರ್ತಿ ಮತ್ತು ವೆಂಕಟಾಚಲಪತಿ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇಬ್ಬರು ಪರಸ್ಪರ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ವಿವಾದಿತ ಜಮೀನಿನ ಸರ್ವೆ ಮಾಡಲು ಮನವಿ ಮಾಡಿದ್ದರು. ಗುರುವಾರ ಸಂಜೆ ಸರ್ವೇಯರ್ ಹಾಗೂ ಪೊಲೀಸ್ […]

ಅಪರಾಧ

ಧಾರವಾಡಕ್ಕೆ ಬಂದಿದ್ದಾನೆ ಖತರ್ನಾಕ್ ಕಳ್ಳ : ಹೋಟೆಲ್ ಉದ್ಯಮಿಗಳೇ ಎಚ್ಚರ…..!

ಧಾರವಾಡ prajakiran.com: ಆತ ನೋಡಲು ಸೂಟು, ಬೂಟು ಹಾಕಿಕೊಂಡು ಖಡಕ್ ಆಗಿ ಇರ್ತಾನೆ. ನೋಡಿದವರು ಆತ ಕೋಟ್ಯಾಧೀಶ ಇರಬಹುದು ಎಂದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಉಳಿದುಕೊಂಡು ಐಷಾರಾಮಿ ಸೇವೆ ಪಡೆದುಕೊಂಡು ಕೊನೆಗೆ ಹೋಟೆಲ್ ನಲ್ಲೇ ಇರುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು, ಹೋಟೆಲ್ ಬಿಲ್ ಕೂಡ ಕೊಡದೇ ಪರಾರಿಯಾಗ್ತಾನೆ. ಈಗಾಗಲೇ ಈ ವ್ಯಕ್ತಿ ಭಾರತದ ದೊಡ್ಡ ದೊಡ್ಡ 181 ಹೋಟೆಲ್ ಗಳಲ್ಲಿ ಈ ರೀತಿ ಮಾಡಿ ಪೊಲೀಸರ ಅತಿಥಿ ಕೂಡ ಆಗಿದ್ದ. ಈಗ ಅದೇ […]

ಅಪರಾಧ

ಧಾರವಾಡದಲ್ಲಿ ಗುಂಡಿನ ದಾಳಿ : 24 ಗಂಟೆಗಳಲ್ಲಿ ಆರೋಪಿ ಬಂಧಿಸಿದ ಪೊಲೀಸರು

ಧಾರವಾಡ prajakiran.com : ಮಧ್ಯರಾತ್ರಿ ಮೂರು ಗುಂಡು ಹಾರಿಸಿ ಮೂವರನ್ನು ಕೊಲ್ಲಲು ಯತ್ನಿಸಿದ್ದ ಆರೋಪಿಯನ್ನು 24 ಗಂಟೆಗಳಲ್ಲಿ ಬಂಧಿಸುವಲ್ಲಿ ಧಾರವಾಡ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಶ್ರೀಶೈಲ್ ಮಡಿವಾಳಪ್ಪ ಗಾಣಗೇರಅಲಿಯಾಸ್ ಶಿರೂರ (ಡಬಲ್ ಗೋಡಾ) ಎಂದು ಗುರುತಿಸಲಾಗಿದೆ.  ಬಂಧಿತನಿಂದ ಕೊಲೆಗೆ ಬಳಸಿದ್ದ ಒಂದು ರಿವಾಲ್ವರ್ ಹಾಗೂ ದ್ವಿಚಕ್ರವಾಹನವನ್ನು ಜಪ್ತ ಮಾಡಲಾಗಿದೆ. ಈತ ಗುಂಡಿನ ದಾಳಿ ನಡೆಸಿದ ನಂತರ ಪರಾರಿಯಾಗಿದ್ದ. ಈತನನ್ನು ಬಂಧಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ಅವರು ಧಾರವಾಡ ಎಸಿಪಿ ಜಿ. ಅನುಷಾ ನೇತೃತ್ವದಲ್ಲಿ […]

ಅಪರಾಧ

ಧಾರವಾಡದಲ್ಲಿ ಮೂರು ಸುತ್ತು ಗುಂಡಿನ ದಾಳಿಗೆ ಒಬ್ಬ ಸಾವು, ಇನ್ನಿಬ್ಬರು ಗಂಭೀರ

ಧಾರವಾಡ prajakiran.com : ರಾತ್ರೋ ರಾತ್ರಿ ಮೂರು ಸುತ್ತು ಗುಂಡಿನ ದಾಳಿ ನಡೆದು, ಗುಂಡಿನ ದಾಳಿಗೆ ಒಬ್ಬ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇದರಿಂದಾಗಿ ಮದಿಹಾಳ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಇಬ್ಬರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಫಲಿಸದೆ ಒಬ್ಬ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ್ದವನನ್ನು ಶಿವಯೋಗಿ ಬಾವಿಕಟ್ಟಿ ಎಂದು ಗುರುತಿಸಲಾಗಿದೆ. ಇತ ನವಲಗುಂದ ತಾಲೂಕಿನ ಶಿರೂರ ಗ್ರಾಮದವನಾಗಿದ್ದು, ಈತ ಕಳೆದ […]

ಅಪರಾಧ

ತನ್ನಅನೈತಿಕ ಸಂಬಂಧಕ್ಕೆ ಮುಳುವಾದ ಮಗನನ್ನೇ ಕೊಲ್ಲಿಸಿದ ಪಾಪಿ ತಾಯಿ

ಧಾರವಾಡ prajakiran.com : ತನ್ನಅನೈತಿಕ ಸಂಬಂಧಕ್ಕೆ ಮುಳುವಾದ ಮಗನನ್ನೇ ಪಾಪಿ ತಾಯಿಯೊಬ್ಬಳು ಇನ್ನೊಬ್ಬ ಮಗ ಹಾಗೂ ಸಖನೊಂದಿಗೆ ಸೇರಿ ಕೊಲ್ಲಿಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಇತ್ತೀಚೆಗೆ (ಕಳೇದ ಬುಧವಾರ) ನಡೆದಿದೆ. ಧಾರವಾಡದ ನುಗ್ಗಿಕೇರಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮೃತ ಮಗನನ್ನು ಹನುಮಂತಗೌಡ ಪಾಟೀಲ್ ಕೊಲೆಯಾಗಿದ್ದು, ಆರೋಪಿ ಮೃತನ ತಾಯಿ‌ ಸುನಂದಾ ಸೋಮನಗೌಡ ಪಾಟೀಲ್ (45) ಈ ದುಷ್ಕೃತ್ಯದ ರೂವಾರಿಯಾಗಿದ್ದಾಳೆ.  ಈ ಪ್ರಕರಣ ಬೇಧಿಸಿರುವ ಧಾರವಾಡ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಹೆಡೆಮುರಿ ಕಟ್ಟಿದ್ದಾರೆ.   […]

ಅಪರಾಧ

ಮದುವೆಯಾಗುವುದಾಗಿ ನಂಬಿಸಿ ಮೋಸವೆಸಗಿದ್ದ ವಂಚಕ ಪೊಲೀಸ ಬಂಧನ

ಬೆಳಗಾವಿ prajakiran.com : ಯುವತಿಯೊಂದಿಗೆ 3 ವರ್ಷಗಳಿಂದ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ ವಂಚಕ ಪೊಲೀಸನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪೊಲೀಸ್ ನನ್ನು ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ಇರ್ಮಾನ ಖಾನ್ ಘೋರಿ (29) ಎಂದು ಗುರುತಿಸಲಾಗಿದೆ. ಇತ ಅದೇ ತಾಲೂಕಿನ ಗ್ರಾಮವೊಂದರ ಯುವತಿಗೆ ವಂಚನೆ, ನಿಂದನೆ ಮತ್ತು ಇತರ ಮೋಸ ಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಮಹಿಳಾ ಪೊಲೀಸ್  ಠಾಣೆಯ ಪೋಲಿಸರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ […]