ಧಾರವಾಡ prajakiran.com : ಅಪ್ರಾಪ್ತೆಯೊಬ್ಬಳು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಹೀಗಾಗಿ ಆಕೆಯನ್ನು ಕೊಲೆ ಮಾಡಿರೋ ಶಂಕೆಯಿದೆ ಎಂದು ಬಾಲಕಿಯ ಕುಟುಂವದವರು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಅತ್ತೆ ಮಗನ ಮೇಲೆಅತ್ಯಚಾರಹಾಗೂ ಕೊಲೆ ಆರೋಪ ಮಾಡಿದ್ದು,ಆತನಿಗೆ ಆತನ ತಾಯಿ ಸಹಕಾರ ನೀಡಿದ್ದಾರೆ ಎಂದು ದೂರಿದ್ದಾರೆ.
ಮೃತ ಬಾಲಕಿಯ ಲಕ್ಷ್ಮಿ ಭಜಂತ್ರಿ(೧೬) ಎಂದು ಗುರುತಿಸಲಾಗಿದೆ. ಈಕೆ ಸವದತ್ತಿ ತಾಲೂಕಿನ ಸತ್ತಗೇರಿ ಗ್ರಾಮದ ಮಾರುತಿ-ಹನುಮವ್ವ ದಂಪತಿಗಳ ಮಗಳಾಗಿದ್ದಾಳೆ.
ನಿನ್ನೆ ಬಾಲಕಿಯನ್ನು ಕರೆತಂದಿದ್ದ ಭೀಮಸಿ, ಮದುವೆಗೆ ವಿರೋಧದ ಹಿನ್ನೆಲೆಯಲ್ಲಿ ಕರೆ ತಂದಿದ್ದ ಎಂದು ತಿಳಿದುಬಂದಿದೆ. ಮದುವೆಗೆ ವಿರೋಧಿಸಿದ್ದ ಬಾಲಕಿ ಮನೆಯವರು ಅತ್ತೆ ಶಾಂತಾ, ಅತ್ತೆ ಮಗ ಭೀಮಶಿ ಮೇಲೆ ಕೊಲೆ ಆರೋಪ ಹೋರಿಸಿದ್ದಾರೆ.
ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಗೆ ಆಕೆಯ ಪಾಲಕರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.