ಧಾರವಾಡ prajakiran. com ಡಿ.14 : ಪತ್ನಿಯೇ ಪ್ರಿಯಕರನ ಜೊತೆಗೆ ಸೇರಿ ಪತಿಯನ್ನೇ ಕೊಂದ ಘಟನೆ ಧಾರವಾಡದ ಮುಳಮುತ್ತಲದಲ್ಲಿ ನಡೆದಿದೆ.
ಮಂಗಳವಾರ ಬೆಳಿಗಿನ ಜಾವ 1-35 ಗಂಟೆಗೆ ಮುಳಮುತ್ತಲ ಗ್ರಾಮದ ಭೀಮಪ್ಪ ಸಿದ್ದಪ್ಪ ಕರಿಶಿದ್ದನವರ ಮನೆಯಲ್ಲಿ ಮಲಗಿರುವಾಗ ಮೃತನ ಹೆಂಡ್ತಿ ಆರೋಪಿ ನಂ 1 ನೇದವನಾದ ಶಿವಾನಂದ ನಾಗಪ್ಪ ನಿಂಬೋಜಿ ಜೊತೆಗೆ ಸೇರಿ ಸ್ಚೈಚ್ ಹಾಕಿದ್ದಳು.
ಭೀಮಪ್ಪ ಸಿದ್ದಪ್ಪ ಕರಿಶಿದ್ದನವರ ಈತನಿಗೆ ಆಕೆಯ ಲವ್ವಿ ಡವ್ವಿ ಗೊತ್ತಾಗಿ ಗಂಡ ಹೆಂಡತಿ ಇಬ್ಬರು ಪದೇ ಪದೇ ತಂಟೆ ಮಾಡುತ್ತಿದ್ದುದಕ್ಕೆ ಆರೋಪಿ ನಂ 2 ನೇದವಳು ಆರೋಪಿ ನಂ 1 ನೇದವನ ಸಂಗಡ ಮಿಲಾಪಿಯಾಗಿ ಭೀಮಪ್ಪ ಸಿದ್ದಪ್ಪ ಕರಿಶಿದ್ದನವರ ಕೊಲೆ ಮಾಡುವ ಉದ್ದೇಶದಿಂದ ಆರೋಪಿ ನಂ 1 ನೇದವನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಅಪರಾಧ ಎದುರಿಸುತ್ತಿದ್ದಾಳೆ.
ಸದರಿ ಇಬ್ಬರು ಆಪಾಧಿತರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಮೃತನ ತಂದೆಯಾದ ಸಿದ್ದಪ್ಪ ಯಲ್ಲಪ್ಪ ಕರಿಶೀದ್ದನವರ ಸಾ. ಮುಳಮುತ್ತಲ ತಾ. ಧಾರವಾಡ ಇವರು ಗರಗ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಸ್ವೀಕರಿಸಿ ಕಲಂ: 302, ಸಹ ಕಲಂ 34 ಐಪಿಸಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಈ ಬಗ್ಗೆ ಸೂಕ್ತ ತನಿಖೆ ಮತ್ತು ಆರೋಪಿ ಪತ್ತೆಗಾಗಿ ಧಾರವಾಡ ಜಿಲ್ಲಾ ಎಸ್.ಪಿ ಪಿ.ಕೃಷ್ಣಕಾಂತ ಐಪಿಎಸ್ ಇವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಎಂ.ಬಿ ಸಂಕದ ಇವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಯಾದ ಎಸ್.ಸಿ.ಪಾಟೀಲ ಸಿಪಿಐ ಗರಗ ರವರು ಕೂಡಲೇ ತನಿಖೆ ಪ್ರಾರಂಭಿಸಿ ಪ್ರಕಣದಲ್ಲಿ ಆರೋಪಿತರಾದ ಶಿವಾನಂದ ನಾಗಪ್ಪ ನಿಂಬೋಜಿ ಹಾಗೂ ಮೃತನ ಹೆಂಡತಿ, ಇಬ್ಬರೂ ಮುಳಮುತ್ತಲ ಇವರನ್ನು ಕೂಡಲೇ ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಲ್ಲದೆ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ಜಪ್ತ ಮಾಡಿದ್ದು ಇರುತ್ತದೆ ಎಂದು ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ ತಿಳಿಸಿದ್ದಾರೆ.