ಧಾರವಾಡ prajakiran. com :
ಕುಡಿದ ನಶೆಯಲ್ಲಿ ಪಾಪಿ ಪತಿಯೊಬ್ಬ ಹೆಂಡತಿಯ ಮೂಗು ಕಟ್ ಮಾಡಿದಲ್ಲದೆ, ಅತ್ತೆಯ ಕತ್ತು ಹಿಚುಕಿ ಕೊಲೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ
ಅಮ್ಮಿನಭಾವಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಈ ಕಿತಾಪತಿ ಮಾಡಿದ ಪಾಪಿ ಪತಿ ಉಮೇಶ ಗಂಡಗುದರಿ ಎಂದು ಗುರುತಿಸಲಾಗಿದೆ.
ಇತನ ಹೆಂಡತಿ ಗೀತಾ ತನ್ನ ಗಂಡನ ಮನೆ ಬಿಟ್ಟು ತಾಯಿ ನೀಲವ್ವ ಜೊತೆಗೆ ತವರು ಮನೆಯಲ್ಲಿ ವಾಸವಿದ್ದಳು.
ಪಾಪಿ ಪತಿ ಉಮೇಶ ‘ಗಂಡು’ಗುದರಿ
ತವರು ಮನೆಗೆ ಆಗಮಿಸಿ ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಡಿದ ನಶೆಯಲ್ಲಿ ಈ ಕೃತ್ಯ ಎಸಗಿದ ಪಾಪಿ ಪತಿ ಉಮೇಶ ಹಾಗೂ ಅವರ ಪತ್ನಿ ಗೀತಾ, ತಾಯಿ ನೀಲವ್ವ ಚೀರಾಟ ಕೇಳಿ ಗ್ರಾಮದವರು ಓಡಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ವೇಳೆ ಗ್ರಾಮಸ್ಥರ ಕಂಡು ಉಮೇಶ ಅಲ್ಲಿಂದ ಕಾಲು ಕಿತ್ತಿದ್ದಾನೆ.
ಮಾಹಿತಿ ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡುತನಿಖೆ ಕೈಗೊಂಡಿದ್ದಾರೆ.