ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ನೇಣಿಗೆ ಶರಣು…!
ಬೆಂಗಳೂರು prajakiran.com : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗಳಾದ ಪದ್ಮಾವತಿ ಅವರ ಮಗಳು ಸೌಂದರ್ಯ ಮನೆಯಲ್ಲಿ ಯಾರು ಇಲ್ಲದಾಗ ಬೆಳ್ಳಂ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯ ಕೆಲಸದವಳು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮೂವತ್ತು ವರ್ಷದ ಸೌಂದರ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಅವರಿಗೆ ಒಂದು ವರ್ಷದ ಸಣ್ಣ ಮಗುವಿದೆ.
ಪತಿ ಡಾ. ನೀರಜ್ ಎಂ.ಎಸ್
ರಾಮಯ್ಯ ಆಸ್ಪತ್ರೆಗೆ ಹೋದಾಗ ಈ ರ್ದುಘಟನೆ ನಡೆದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಎಂಬಿಬಿಎಸ್ ಓದಿದ್ದ ಸೌಂದರ್ಯ ಅವರು ಕೂಡ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು.
ಈ ಪ್ರಕರಣದ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೌಂದರ್ಯ ಸಾವಿನ ತನಿಖೆ ನಡೆದಿದೆ.
ಡಾ. ನೀರಜ್ ಅವರ ಜೊತೆಗೆ 2018ರಲ್ಲಿ ಸೌಂದರ್ಯ ಮದುವೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.