ಪಣಂಬೂರು Prajakiran.com : ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯೊಂದು ನವ ಮಂಗಳೂರು ಬಂದರಿನ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.
ಧಾರಾಕಾರ ಮಳೆ ಸುರಿಯುತ್ತಿರುವ ವೇಳೆ ಬರ್ತ್ ಕೊನೆಯನ್ನು ಚಾಲಕ ಸರಿಯಾಗಿ ಅಂದಾಜಿಸದೆ ಹಿಂದೆಕ್ಕೆ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.
ಕಂಟೈನರ್ ನಲ್ಲಿ ಚಾಲಕ ಮತ್ತು ಬೇರೆ ಕೆಲಸಕ್ಕೆಂದು ಹೋಗುವ ಕಾರ್ಮಿಕ ಒಬ್ಬ ಈ ಕಂಟೇನರ್ ಹತ್ತಿದ್ದು, ಸದ್ಯ ಕಾರ್ಮಿಕ ಮಲಕಪ್ಪ( 35) ನ ಮೃತದೇಹವನ್ನು ಹೊರ ತೆಗೆಯಲಾಗಿದೆ.
ಚಾಲಕ ರಾಜೇಸಾಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.