ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನತ ನಗರದ ಔನು ಜಾಫರ್ ಇರಾನಿ ಹಾಗೂ ರಿಯಾಜ್ ಅಹ್ಮದ ನಜೀರ್ ಅಹ್ಮದ ಹಂಚಿನಮನಿ ಬಂಧಿತರು. ಇವರು ಜನ್ನತ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ ೨೦ ಸಾವಿರ ರೂ. ಮೌಲ್ಯದ ೭೩೦ ಗ್ರಾಮ್ ಗಾಂಜಾ ಮತ್ತು ೧೭೩೦ ರೂ. […]
ಅಪರಾಧ
ಧಾರವಾಡದ ರೌಡಿಶೀಟರ್ ತಿರುಪತಿ ಹಿರೇಮನಿ ಗಡಿಪಾರು
*ಧಾರವಾಡದ ರೌಡಿಶೀಟರ್ ತಿರುಪತಿ ಹಿರೇಮನಿ ಗಡಿಪಾರು* *ಧಾರವಾಡದಲ್ಲಿ ಹೆಚ್ಚಾದ ಅಪರಾಧ ಚಟುವಟಿಕೆ ಹಿನ್ನಲೆ* *ರೌಡಿಶೀಟರ್ಗಳ ಗಡಿಪಾರಿಗೆ ಚಾಲನೆ* *ಕಲಬುರ್ಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು* ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ರೌಡಿಶೀಟರ್ಗಳ ಗಡಿಪಾರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಧಾರವಾಡದ ರೌಡಿಶೀಟರ್ ತಿರುಪತಿ ತಿಮ್ಮಣ್ಣ ಹಿರೇಮನಿ(30) ಗಡಿಪಾರಿಗೆ ಒಳಗಾದ ರೌಡಿಶೀಟರ್ ಆಗಿದ್ದಾನೆ. ತಿರುಪತಿ, ಧಾರವಾಡದ ಲಕ್ಷ್ಮೀಸಿಂಗನಕೇರಿ ಬಡಾವಣೆ ನಿವಾಸಿಯಾಗಿದ್ದು, ಆತನ ವಿರುದ್ಧ ಧಾರವಾಡದ ವಿದ್ಯಾಗಿರಿ […]
ಧಾರವಾಡ : ವಿಶೇಷ ಚೇತನ ಮಗು ಹತ್ಯೆಗೈದ ತಾಯಿಯ ಬಂಧನ
*ವಿಶೇಷ ಚೇತನ ಮಗುವನ್ನು ಹತ್ಯೆಗೈದ ತಾಯಿ; ಹುಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ* ಧಾರವಾಡ ಪ್ರಜಾಕಿರಣ.ಕಾಮ್ : ತಾಯಿಯೇ ಹೆತ್ತ ಮಗುವಿನ ಕತ್ತೂ ಕೋಯ್ದು ಹತ್ಯೆಗೈದ ಘಟನೆ ಕುರಿತು ಧಾರವಾಡದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದರು. ಧಾರವಾಡದ ಕಮಲಾಪುರದಲ್ಲಿ ಜ್ಯೋತಿ ಹಿರೇಮಠ ಎಂಬ ಮಹಿಳೆ ಅವಳಿ ಜವಳಿ ಮಗುವನ್ನು ಹೊಂದಿದ್ದಳು. ಆದರೆ, ಆಕೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂಬ ಪ್ರಿಯಕರನ ಮಾತಿಗೆ ಮಣಿದು ತರಕಾರಿ ಹೆಚ್ಚುವ ಚಾಕುವಿನಿಂದ […]
ಧಾರವಾಡದ ಕಮಲಾಪುರದಲ್ಲಿ ಹೆತ್ತಮಗುವನ್ನೇ ಕೊಂದಳಾ ತಾಯಿ….!?
ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಕೊಲೆಗಳು ನಿಲ್ಲುತ್ತಲೇ ಇಲ್ಲ ಎಂದರೆ ತಪ್ಪಾಗಲಾರದು. ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ. ಧಾರವಾಡದ ಕಮಲಾಪುರದಲ್ಲಿ ಐದನೇ ದಿನಕ್ಕೆ ಐದನೇ ಕೊಲೆ ನಡೆದಿದೆ. ಧಾರವಾಡದ ಕಮಲಾಪುರದಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಮಗುವಿನ ಶವವೊಂದು ಪತ್ತೆಯಾಗಿದೆ. ಮನೆಯಲ್ಲಿಯೇ ಶವ ಪತ್ತೆ ಯಾಗಿದ್ದು, ಸಹನಾ ಹಿರೇಮಠ(5) ಕೊಲೆಗೀಡಾದ ಮಗುವಾಗಿದೆ ತಾಯಿ ಜ್ಯೋತಿ ಹಿರೇಮಠ ಜೊತೆ ವಾಸಿಸುತ್ತಿದ್ದ ಮಗು, ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಕೊಲೆಯಾಗಿದೆ ಎಂದು ಹೇಳಲಾಗುತ್ತದೆ. ಘಟನಾ ಸ್ಥಳಕ್ಕೆ ಧಾರವಾಡದ ಉಪನಗರ […]
ಓದಿನ ಕಡೆ ಗಮನ ಕೊಡು ಎಂದಿದ್ದಕ್ಕೆ ಕೆರೆಗೆ ಹಾರಿದ ಮಗ…!
ಧಾರವಾಡ ಪ್ರಜಾಕಿರಣ.ಕಾಮ್ : ಕ್ರೀಡೆ ಬಿಟ್ಟು ಓದಿನ ಕಡೆಗೆ ಗಮನಕೊಡು ಎಂದು ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ಮಗನೊಬ್ಬ ತನ್ನ ಜೀವವನ್ನೇ ಕಳೆದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಸಾಧನಕೇರಿಯ ಚೇತನ ತೊಂಡಿಹಾಳ ಎಂಬ ಯುವಕನೇ ಕೆಲಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫುಟ್ಬಾಲ್ನಲ್ಲಿ ಆಸಕ್ತಿ ಹೊಂದಿದ್ದ ಚೇತನಗೆ ಆತನ ತಂದೆ ಶರಣಪ್ಪ, ಬರೀ ಫುಟ್ಬಾಲ್ ಕಡೆ ಗಮನಹರಿಸಬೇಡ ಓದಿನ ಕಡೆಗೂ ಗಮನಹರಿಸು ಎಂದಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚೇತನ ಕೆಲಗೇರಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. […]
ಧಾರವಾಡದ ವಿಮಲ್ ಎಗ್ ರೈಸ್ ಕುಕ್ ಮರ್ಡರ್….!?
ಧಾರವಾಡ ಪ್ರಜಾಕಿರಣ.ಕಾಮ್ : ವಿದ್ಯಾನಗರಿ ಧಾರವಾಡದಲ್ಲಿ ಮತ್ತೆ ನೆತ್ತರು ಹರದಿದೆ. ನಾಲ್ಕು ದಿನಗಳಲ್ಲಿ ನಾಲ್ಕು ಹೆಣಗಳು ಸಾಲಾಗಿ ಬಿದ್ದಿವೆ. ಹೀಗಾಗಿ ಜನ ನೆಮ್ಮದಿಯಿಂದ ಓಡಾಡಲು ಹೆದರುವಂತಾಗಿದೆ. ಹೌದು ಇದು ಅಚ್ಚರಿಯಾದರೂ ನಂಬಲೇಬೇಕಾದ ಸತ್ಯ. ಧಾರವಾಡದ ವಿಮಲ್ ಹೋಟೆಲ್ ಕುಕ್ ನಿನ್ನೆ ತಡರಾತ್ರಿ ಕೊಲೆಯಾಗಿದ್ದಾನೆ. ಮರ್ಡರ್ ಆದ ಫಕ್ಕೀರೇಶ್ ಮೈಲಾರಪ್ಪ ಪ್ಯಾಟಿ (40). ಈತ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಳ್ಳಿಯವನೆಂದು ಎಂದು ಗುರುತಿಸಲಾಗಿದೆ. ಈತ ಧಾರವಾಡದ ಸಂಗಮ್ ಟಾಕೀಜ್ ಬಳಿಯ ವಿಮಲ್ ಎಗ್ರೈಸ್ ಹೋಟೆಲ್ ಕುಕ್ ಆಗಿ […]
ಧಾರವಾಡದ ನವಲೂರಿನ ಬಳಿ ವೃದ್ದೆ ಕೊಲೆ…!
ಆಸ್ತಿಗಾಗಿ ಬೆಳ್ಳಂಬೆಳಿಗ್ಗೆ ಧಾರವಾಡದಲ್ಲಿ ಹರಿಯಿತು ನೆತ್ತರು..! ಧಾರವಾಡ ಪ್ರಜಾಕಿರಣ.ಕಾಮ್ : ನಿನ್ನೆಯಷ್ಟೇ ಧಾರವಾಡದ ಹೊರವಲಯದಲ್ಲಿ ನಡೆದ ಕೊಲೆಯಿಂದ ಬೆಚ್ಚಿಬಿದ್ದಿದ್ದ ವಿದ್ಯಾಕಾಶಿಯಲ್ಲಿ, ಇಂದು ಬೆಳ್ಳಂಬೆಳಿಗ್ಗೆ ನೆತ್ತರು ಹರಿದಿದೆ. ಬೆಳಗಿನ ಜಾವ ದೇವಸ್ಥಾನಕ್ಕೆ ಹೊರಟಿದ್ದ ವೃದ್ಧೆಯನ್ನು ವಿಠ್ಠಲ ದೇವಸ್ಥಾನದ ಪಕ್ಕದಲ್ಲೇ ಕೊಚ್ಚಿ ಕೊಲೆ ಮಾಡಲಾಗಿದೆ. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈ ಮಹಿಳೆ ಹೆಸರು ಕರೆವ್ವ ಇರಬಗೇರಿ. ಗಂಡ ಹಾಗೂ ಮಗನನ್ನು ಕಳೆದುಕೊಂಡಿದ್ದ ಈಕೆ ನವಲೂರಿನ ತನ್ನ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಳು. ನವಲೂರು ಈಕೆಯ ಗಂಡನ ಊರು. ಗಂಡ […]
ಧಾರವಾಡದ ವಿನಯ ಡೇರಿ ಬಳಿ ಒಬ್ಬನ ಬರ್ಬರ ಕೊಲೆ, ಇನ್ನೊಬ್ಬನ ಮೇಲೆ ಹಲ್ಲೆ
*ಐವರನ್ನ ಹೆಚ್ಚಿನ ಮಾಹಿತಿಗಾಗಿ ವಶಕ್ಕೆ ಪಡೆದ ಪೊಲೀಸರು* *ಹದಿನೈದರಿಂದ ಇಪ್ಪತ್ತು ಜನರ ಗುಂಪಿನಿಂದ ಕಲ್ಲು, ರಾಡ್ ನಿಂದ ಹಲ್ಲೆ,* ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ನಗರದ ಹೊರವಲಯದ ವಿನಯ ಡೇರಿ ಬಳಿ ಯುವಕನೊಬ್ವನನ್ನು ಬರ್ಬರವಾಗಿ ಕೊಲೆ ಮಾಡಿದ್ದು,ಇನ್ನೊಬ್ಬನಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ವಿನಯ ಡೇರಿ ಬಳಿ ಬೈಕ ನಿಲ್ಲಿಸಿದ್ದ ಇಬ್ಬರು ಯುವಕರ ಮೇಲೆ ಕಾರಿನಲ್ಲಿ ಬಂದಿದ್ದ ವಿನಯ ಡೇರಿ ನಿರ್ವಾಹಕ ನಟರಾಜ್ ಎಂಬುವವರ ಡೈವರ್ ಬೀರಪ್ಪ ರಸ್ತೆ ಬಿಡುವಂತೆ ಹೇಳಿದ್ದಾರೆ. ಆಗ […]
ಚುನಾವಣೆ ಸೋತಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕವಿವಿ ನೌಕರ…..!
ಧಾರವಾಡ ಪ್ರಜಾಕಿರಣ.ಕಾಮ್ : ಚುನಾವಣೆಯಲ್ಲಿ ಸೋತಿದಕ್ಕೆ ಮನನೊಂದು ಕವಿವಿ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ರೇಣುಕಾ ನಗರದಲ್ಲಿ ನಡೆದಿದೆ. ಕರ್ನಾಟಕ ವಿಶ್ವವಿದ್ಯಾಲಯದ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಸೋತಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ಚಂದ್ರಕಾಂತ ಜಿ ಸಾವಳಗಿ ಎಂಬಾತನೇ ಸಾವಿಗೆ ಶರಣಾದ ನೌಕರನಾಗಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ನಡೆದ ಚುನಾವಣೆಯಲ್ಲಿ ಇವರು ಸೋಲು ಅನುಭವಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. Share on: WhatsApp
ಅಂತರಾಜ್ಯ ಕಳ್ಳನ ಬಂಧಿಸಿದ ಧಾರವಾಡ ಶಹರ ಪೊಲೀಸರು….!
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನ 35 ಗ್ರಾಂ ಚಿನ್ನಾಭರಣ ಜಪ್ತಿ ಧಾರವಾಡ ಪ್ರಜಾಕಿರಣ.ಕಾಮ್ ಡಿ 19 :ಮೂರ್ಚೆ ಬರುವ ಚಾಕೋಲೇಟನ್ನು ತಿನಿಸಿ, ಮೈ ಮೇಲೆ ಇದ್ದ ಬಂಗಾರದ ಆಭರಣವನ್ನು ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧಿಸುವಲ್ಲಿ ಧಾರವಾಡ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಮೂಲಕ ಅಂದಾಜು 75,000/- ರೂ ಕಿಮ್ಮತ್ತಿನ 15 ಗ್ರಾಂ ಬಂಗಾರದ ಚೈನ್ ಮತ್ತು ಪಿಕ್ ಪಾಕೇಟ್ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಅರೈಕೆ ಮಾಡಿದ್ದಾರೆ. ಅಂದಾಜು 1,92,500/- ರೂ ಕಿಮ್ಮತ್ತಿನ […]