*ವಿಶೇಷ ಚೇತನ ಮಗುವನ್ನು ಹತ್ಯೆಗೈದ ತಾಯಿ; ಹುಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ*
ಧಾರವಾಡ ಪ್ರಜಾಕಿರಣ.ಕಾಮ್ : ತಾಯಿಯೇ ಹೆತ್ತ ಮಗುವಿನ ಕತ್ತೂ ಕೋಯ್ದು ಹತ್ಯೆಗೈದ ಘಟನೆ ಕುರಿತು ಧಾರವಾಡದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದರು.
ಧಾರವಾಡದ ಕಮಲಾಪುರದಲ್ಲಿ ಜ್ಯೋತಿ ಹಿರೇಮಠ ಎಂಬ ಮಹಿಳೆ ಅವಳಿ ಜವಳಿ ಮಗುವನ್ನು ಹೊಂದಿದ್ದಳು.
ಆದರೆ, ಆಕೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂಬ ಪ್ರಿಯಕರನ ಮಾತಿಗೆ ಮಣಿದು ತರಕಾರಿ ಹೆಚ್ಚುವ ಚಾಕುವಿನಿಂದ ತಾಯಿಯೇ ವಿಶೇಷ ಚೇತನ ಮಗುವನ್ನು ಹತ್ಯೆ ಮಾಡಿದ್ದಾರೆ.
ಈ ಕುರಿತು ಮಹಿಳೆ ಹಾಗೂ ಆಕೆಯ ಪ್ರಿಯಕರ ರಾಹುಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.