ಧಾರವಾಡ prajakiran.com : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೀಲಿ ಮುರಿದು ನಗ ಮತ್ತು ಚಿನ್ನದ ಆಭರಣ ಕಳ್ಳತನ ಮಾಡಿದ ಘಟನೆ ಧಾರವಾಡದ ಮದಾರಮಡ್ಡಿ ಕಟಕಕರ ಓಣಿಯಲ್ಲಿ ನಡೆದಿದೆ.
ಶಹನಾಜ್ ಬದಾಮಿ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ರಾಡ್ನಿಂದ ಮನೆಯ ಕೀಲಿ ಮುರಿದು ೪೦ ಸಾವಿರ ರೂಪಾಯಿ ನಗದು, ೧೨ ಗ್ರಾಂ.ನಷ್ಟು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ.
ಶಹನಾಜ್ ಬದಾಮಿಯವರು ಊರಿಗೆ ಹೋದಾಗ ಈ ಕಳ್ಳತನ ನಡೆದಿದ್ದು, ನಿನ್ನೆ ವಾಪಸ್ಸು ಬಂದಾಗ ಕಳ್ಳತನವಾಗಿದ್ದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗಿನಾಳ, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.