ಧಾರವಾಡ prajakiran.com : ಹತ್ತಿಕಾಳು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಆರೋಪಿಯೋಬ್ಬನನ್ನು ಧಾರವಾಡ ತಾಲೂಕಿನ ಗರಗ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದ ಸುನೀಲ ರಾಮಚಂದ್ರ ಕಾಂಬಳೆ ಎಂದು ಗುರುತಿಸಲಾಗಿದೆ.
ಈತನು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಮಂಜುನಾಥ ಗೋಕಾವಿ ಎಂಬುವರಿಂದ ೧ ಕೋಟಿ.ರೂ.ಮೌಲ್ಯದ ಹತ್ತಿಕಾಳು ಖರೀದಿಸಿ, ನಂತರ ಹಣ ಪಾವತಿಸಿರಲಿಲ್ಲ.
ಈ ಕುರಿತು ಮಂಜುನಾಥ ಗೋಕಾವಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ, ಪೊಲೀಸ್ ಠಾಣೆಯ ಪಿಎಸ್ಐ ಕಿರಣ ಮೋಹಿತೆ ನೇತೃತ್ವದಲ್ಲಿ ಪೊಲೀಸರು ಸುನೀಲ ಕಾಂಬಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.