ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ prajakiran.com : ರೈತನೊಬ್ಬ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದ ರೈತ ಪುಟ್ಟಣ್ಣ ಅವರೇ ಆತ್ಮ ಹತ್ಯೆ ಮಾಡಿಕೊಂಡ ರ್ದುದೈವಿ.
ಖಾಸಗಿ ಬ್ಯಾಂಕಿನಲ್ಲಿ ಭತ್ತದ ಬೆಳೆಗೆ ೩ಲಕ್ಷ ಸಾಲವನ್ನು ಮಾಡಿದ್ದ ಪುಟ್ಟಣ್ಣ.
ಭತ್ತಕ್ಕೆ ಸೂಕ್ತ ಬೆಲೆ ಸಿಗದೆ, ಹಾಗೂ ಸಕಾಲಕ್ಕೆ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಚಾಮರಾಜನಗರದ ರೈತ ಸಂಘದ ವತಿಯಿಂದ ಜಿಲ್ಲಾಸ್ಪತ್ರೆಯ ಮುಂದೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು.