ಧಾರವಾಡ : ಧಾರವಾಡದ ಟಿಪ್ಪು ಸುಲ್ತಾನ ವೃತ್ತದಲ್ಲಿರುವ ಅಂಗಡಿಯೊಂದಕ್ಕೆ ಆಕಸ್ಮಿಕ
ಬೆಂಕಿ ತಗುಲಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮಾಹಿತಿಯನ್ನು ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸ ನಡೆಸಿದರು.
ಅದೃಷ್ಟವಶಾತ್ ಅಕ್ಕ ಪಕ್ಕದಲ್ಲಿದ್ದ ಯಾವುದೇ ಅಂಗಡಿಗಳಿಗೆ ಬೆಂಕಿ ಕೆನ್ನಾಲಿಗೆ ವಿಸ್ತರಿಸಿಲ್ಲ.
ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ನಂದಿಸಿದರು.
ಈ ಘಟನೆಯಲ್ಲಿ
ಅಪಾರ ಪ್ರಮಾಣದ ಆಯಿಲ್ ಸುಟ್ಟು ಹೋಗಿದ್ದು, ಅಂದಾಜು ಹಾನಿ ಇನ್ನಷ್ಟೇ ತಿಳಿದುಬರಬೇಕಿದೆ.