ಧಾರವಾಡ prajakiran.com : ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಇರುವ ಸಿಲ್ವರ್ ಆರ್ಚರ್ಡ್ ಕಾಲೋನಿಯ ಮುಖ್ಯ ರಸ್ತೆಯಲ್ಲಿರುವ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನ ಸ್ಟೀಲ್ ಶಟರ್ಸ್ ಅನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡಲಾಗಿದೆ.
ಅಂದಾಜು ಮೂವತ್ತು ಸಾವಿರ ಮೌಲ್ಯದ ಸಾಮಗ್ರಿಗಳನ್ನು ನಿನ್ನೆ ತಡ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ.
ಈ ಹಿಂದೆ ಸಹ ಕಳ್ಳರು ಎರಡು ಸಲ ಭಾಸ್ಕರ್ ಶೆಟ್ಟಿ ಅವರ ಪಾನ್ ಶಾಪ್ ನಲ್ಲಿನ ಸಾವಿರಾರು ರೂಪಾಯಿಯ ಸಾಮಗ್ರಿ ಗಳನ್ನು ಕಳವು ಮಾಡಿದ್ದರು.
ಆಗ ಕಳವು ಆದ ವಿಚಾರವಾಗಿ ಪೊಲೀಸ್ ಕಂಪ್ಲೇಟ್ ನೀಡಿದ್ದರು. ಪೊಲೀಸರು ಕಳ್ಳತನದ ವಿಷಯ ಹಾಗೂ ಪಾನಶಾಪ್ ಕಳ್ಳರನ್ನು ಲಘುವಾಗಿ ಪರಿಗಣಿಸಿದ್ದರಿಂದ ಇಂದು ಮತ್ತೆ ಕಳ್ಳರು ಭಾಸ್ಕರ್ ಶೆಟ್ಟಿ ಪಾನ್ ಶಾಪ್ ಅನ್ನು ದೋಚಿದ್ದಾರೆ.
ಸಣ್ಣ ಪಾನ್ ಶಾಪ್ ಇಟ್ಟುಕೊಂಡು ತಮ್ಮ ಕುಟುಂಬ ನಡೆಸಿಕೊಂಡು ಹೋಗುತ್ತಿರುವ ಇವರಿಗೆ ಪದೇ ಪದೇ ಕಳ್ಳರ ಕಾಟದಿಂದ ದಿಕ್ಕೆ ತೋಚದಂತಾಗಿದ್ದು, ಕಂಗಾಲಾಗಿದ್ದಾರೆ.
ಕಳವು ಆದ ವಿಷಯ ತಿಳಿಯುತ್ತಿದ್ದಂತೆ ಧಾರವಾಡದ ಉಪನಗರ ಪೊಲೀಸ್ ಠಾಣಾಧಿಕಾರಿಗಳು ಕಳವು ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.