ಧಾರವಾಡ prajakiran.com ಜು.24: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗಿದ್ದರಿಂದ ನಿನ್ನೆ (ಜು.23ರಂದು) ಮಧ್ಯಾಹ್ನ ಕೋಟುರ ಗ್ರಾಮದ ಖಾದರಬಾಶಾ ಖುರೇಶಿ (47) ಎಂಬ ವ್ಯಕ್ತಿ ಬೇಲೂರ ಸಮೀಪದ ಹಳ್ಳದಲ್ಲಿ ಕೊಚ್ಚಿಕೊಂಡು ಹೊಗಿದ್ದ.
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಮಾಹಿತಿಯನ್ನು ಅರಿತ
ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದರು.
ಆದರೆ ಆತ ಇಂದು ಮಧ್ಯಾಹ್ನ ಬೇಲೂರ ಹದ್ದಿನಲ್ಲಿ ಹಳ್ಳದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಇದರಿಂದಾಗಿ ಅವರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತನ ವಾರಸುದಾರರಿಗೆ ನಿಯಮಾವಳಿಯಂತೆ ಪರಿಹಾರ ಧನ ನೀಡಲಾಗುವುದು ಎಂದು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.